News Karnataka Kannada
Wednesday, May 01 2024
ಬೀದರ್

ಅಬ್ಬಬ್ಬಾ ತರಕಾರಿ ದರ ಕೇಳಿ ಗ್ರಾಹಕ ಕಂಗಾಲು: ಬೀನ್ಸ್‌ ಕೆಜಿಯೊಂದಕ್ಕೆ 250 ರೂ.

Beans price reaches Rs 250
Photo Credit : News Kannada

ಬೀದರ್: ತಾಲ್ಲೂಕಿನಾದ್ಯಂತ ತರಕಾರಿ ಮಾರುಕಟ್ಟೆಯಲ್ಲಿ ಈ ವಾರ ವಿವಿಧ ತರಕಾರಿ, ಹಣ್ಣುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು, ಮುಂಗಾರು ಮಳೆ ಕೊರತೆ ಹಾಗೂ ಸಗಟು ಪೂರೈಕೆಯ ಕುಸಿತದಿಂದ ಬೆಲೆ ಹೆಚ್ಚಳಗೊಂಡಿದೆ.

ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರಿಂದ ಹಣ್ಣುಗಳ ಬೆಲೆಯೂ ಗಗನದತ್ತ ಮುಖ ಮಾಡಿದ್ದು, ಜ್ಯೂಸ್‌ಗೆ ಹೆಚ್ಚಾಗಿ ಬಳಕೆಯಾಗುವ ಕಿತ್ತಳೆ, ಸಪೋಟ, ಮೋಸಂಬಿ ದಾಳಿಂಬೆ ಹಣ್ಣುಗಳ ಬೆಲೆಯಲ್ಲಿ ತೀವ್ರ ಹೆಚ್ಚಳ ಕಂಡು ಬಂದಿದೆ.

ಟೊಮೊಟೊ ಕೆ.ಜಿಗೆ ₹ 30-50, ಬೀನ್ಸ್ ₹ 250-300, ಶುಂಠಿ 60-300, ದೊಣ್ಣೆ ಮೆಣಸಿನಕಾಯಿ ₹ 60-100 ಇದೆ. ಮಾರುಕಟ್ಟೆಯಲ್ಲಿ ಹಿರೇಕಾಯಿ ತೀವ್ರ ಕೊರತೆಯಿಂದ ₹ 100ಕ್ಕೆ ಮಾರಾಟವಾಗುತ್ತಿದೆ. ಹಣ್ಣುಗಳ ಬೆಲೆಯೂ ಏರಿಕೆಯಾಗಿದ್ದು ಸೇಬು ಕೆ.ಜಿಗೆ 180-230, ಡ್ರಾಗನ್ 80-130, ದಾಳಿಂಬೆ 100-180, ಏಲಕ್ಕಿಬಾಳೆ 80-100, ದ್ರಾಕ್ಷಿ 70-200 ಏರಿಕೆಯಾಗಿದೆ.

ಮಳೆ ಕೊರತೆಯಿಂದಾಗಿ ಸ್ಥಳೀಯವಾಗಿ ಬೆಳೆಯಲಾಗುತ್ತಿದ್ದ ಸೌತೆಕಾಯಿ, ಬದನೆ, ಈರುಳ್ಳಿಯೂ ಸ್ಥಗಿತಗೊಂಡಿದೆ. ಹಾಗಾಗಿ ಬಹುತೇಕ ತರಕಾರಿ ನೆರೆ ರಾಜ್ಯದ ಲಾತೂರ್‌, ನೀಲಂಗಾ ಸೇರಿ ಇತರ ಭಾಗಗಳಿಂದ ಪೂರೈಕೆಯಾಗುತ್ತಿದೆ.

‘ಕಳೆದ ವಾರ ತರಕಾರಿ ದರ ಕಡಿಮೆ ಇತ್ತು. ಸದ್ಯ ಸ್ಥಳೀಯ ತರಕಾರಿ ಬೆಳೆಯುತ್ತಿಲ್ಲ. ಇದರಿಂದ ಬೇರೆ ಕಡೆಯಿಂದ ಬೆಳಗಾವಿ, ದಾವಣಗೆರೆ ಧಾರವಾಡ ಸೇರಿ ಬೇರೆ ಬೇರೆ ಭಾಗದಿಂದ ತರಕಾರಿಗಳನ್ನು ಖರೀದಿಸುವ ಪರಿಸ್ಥಿತಿ ಎದುರಾಗಿದೆ. ಎಲ್ಲಾ ತರಕಾರಿಗಳ ಬೆಲೆ ಕಳೆದ ವಾರಕ್ಕಿಂತ ₹ 30-50 ಹೆಚ್ಚಳವಾಗಿದೆ’ ಎಂದು ಇಲ್ಲಿನ ತರಕಾರಿ ವ್ಯಾಪಾರಿ ಮಲ್ಲಪ್ಪಾ ಮೊರಂಬಿ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು