Categories: ಬೀದರ್

ಪಶು-ಪಕ್ಷಿಗಳಿಗೆ ನೀರಿನ ವ್ಯವಸ್ಥೆ: ಚಿಟಗುಪ್ಪ ಪುರಸಭೆ ಕಾರ್ಯಕ್ಕೆ ಮೆಚ್ಚುಗೆ

ಬೀದರ್: ಚಿಟಗುಪ್ಪ ಪುರಸಭೆ ಕಚೇರಿ ಆವರಣದಲ್ಲಿ ಸಿಬ್ಬಂದಿಗಳು ಪಶು-ಪಕ್ಷಿಗಳಿಗೆ ನಿತ್ಯ ಕುಡಿಯುವ ನೀರಿನ ದಾಹ ತಣಿಸುವ ಕಾರ್ಯ ಮಾಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಪುರಸಭೆ ಆವರಣದಲ್ಲಿ ಮಾವು-ಬೇವಿನ ಮರಗಳು ಬೃಹದಾಕಾರದಲ್ಲಿ ಬೆಳೆದಿವೆ. ಮಂಗಗಳು ಮರಗಳ ಮೇಲೆ ಹಿಂಡುಗಟ್ಟಲೇ ಇರುತ್ತವೆ.

ಅವುಗಳಿಗೆ ಕುಡಿಯಲು ನೀರು ಸಿಗದಿದ್ದಕ್ಕೆ ಚಡಪಡಿಸುತ್ತಿರುವುದನ್ನು ಕಂಡ ಪುರಸಭೆ ಸಿಬ್ಬಂದಿ ಕುಡಿಯುವುದಕ್ಕಾಗಿ ನೀರಿನ ವ್ಯವಸ್ಥೆ ಮಾಡಿದ್ದಾರೆ. ಪಟ್ಟಣಕ್ಕೆ ನೀರು ಬಿಡುವ ಸಿಬ್ಬಂದಿಯು ಮೇಲಧಿಕಾರಿಗಳ ಆದೇಶದಂತೆ, ನಿತ್ಯ ಮಾವಿನಮರಗಳ ಕೆಳಗೆ ಇರುವ ನಲ್ಲಿಗೆ ನಿರಂತರವಾಗಿ ನೀರು ಬಿಡುವುದು ಹಾಗೂ ಬಕೆಟ್‌ ಆಕೃತಿಯ ತೊಟ್ಟಿಯಲ್ಲಿ ನೀರು ತುಂಬಿಸುವ ಕಾರ್ಯ ಆರಂಭಿಸಿದ್ದಾರೆ. ಅವರ ಕಾರ್ಯದಿಂದ ಈಗ ನಿತ್ಯ ನೂರಾರು ಪಕ್ಷಿಗಳು, ಮಂಗಗಳು ಬಂದು, ಬಕೆಟ್‌ನಲ್ಲಿರುವ ನೀರು ಕುಡಿಯುತ್ತ ಮಾವಿನ ಮರದ ಮೇಲೆ ಕುಣಿದಾಡುತ್ತ ವಿಶ್ರಾಂತಿ ಪಡೆಯುತ್ತಿವೆ.

ಮರಗಳಲ್ಲಿ ದೂರದಿಂದ ಆಗಮಿಸಿದ ವಿವಿಧ ಬಗೆಯ ಪಕ್ಷಿಗಳು ಕಾಣಿಸುತ್ತಿವೆ. ಅವುಗಳ ಚಿಲಿ-ಪಿಲಿ ಧ್ವನಿ ಎಲ್ಲರ ಮನ ತಣಿಸುತ್ತಿವೆ. ಪರಿಸರ, ಪಕ್ಷಿ-ಪ್ರಾಣಿಪ್ರಿಯರು ಪುರಸಭೆಯ ಈ ಕಾರ್ಯಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮರಗಳ ಮೇಲೆ ಟೊಂಗೆಯಿಂದ ಟೊಂಗೆಗೆ ಜಿಗಿಯುವ ಮಂಗಗಳು ಕೆಳಗಡೆ ನಿಲ್ಲಿಸಿದ ನಾಗರಿಕರ ಬೈಕ್‌ಗಳ ಮೇಲು ಕುಣಿದಾಡಿ ಅವುಗಳಿಗೆ ಹಾನಿ ಮಾಡುತ್ತಿವೆ. ಆದರೂ ನಾಗರಿಕರು ಜಾನುವಾರುಗಳ ಮೇಲಿನ ಪುರಸಭೆಯವರ ಪ್ರೀತಿ ಕಾಳಜಿ ಮೆಚ್ಚಿ ಸಹಕರಿಸುತ್ತಿದ್ದಾರೆ.

ಪಟ್ಟಣದ ಇತರ ಸರ್ಕಾರಿ, ಖಾಸಗಿ ಕಚೇರಿಗಳ ಸಿಬ್ಬಂದಿಯು, ಪುರಸಭೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ತಮ್ಮಲ್ಲೂ ಪಶು-ಪಕ್ಷಿಗಳಿಗೆ ಬೇಸಿಗೆ ಮುಗಿಯುವವರೆಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ನಾಗರಿಕರು ತಮ್ಮ ಮನೆಯ ಚಾವಣಿ ಮೇಲೆ ಮುಚ್ಚಳಿಕೆಯಲ್ಲಿ ನೀರು ತುಂಬಿಡಬೇಕು. ಹೀಗೆ ಮಾಡುವುದರಿಂದ ಅವುಗಳ ಸಂತತಿ ಉಳಿಸಿ ಬೆಳೆಸಿದಂತಾಗುತ್ತದೆ. ಪರಿಸರ ಸಂರಕ್ಷಣೆಗೆ ಪರೋಕ್ಷವಾಗಿ ಕಾರಣರಾದಂತೆ ಆಗುತ್ತದೆ ಎಂದು ಮುಖ್ಯಾಧಿಕಾರಿ ಎಸ್.ವಿ.ಭೂಸ್ಲೆ ತಿಳಿಸಿದ್ದಾರೆ.

Maithri S

Recent Posts

ಅಧಿಕಾರಿಗಳಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಮತದಾನದ ಆರೋಪ: ಸ್ಥಳಕ್ಕೆ ಉಮೇಶ ಜಾಧವ್ ಭೇಟಿ

ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…

7 hours ago

ಅತನೂರ ಗ್ರಾಮದಲ್ಲಿ ಸರ್ವಧರ್ಮಗಳ ಆರಾಧ್ಯದೈವ ನಂದಿ ಬಸವನ ಜಾತ್ರೆಯ ಸಡಗರ

ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.

7 hours ago

ಪ್ರೀತಿಸಿ ಮದುವೆಯಾದ ಅನ್ಯಕೋಮಿನ ಜೋಡಿ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…

7 hours ago

ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ  ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

7 hours ago

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…

8 hours ago

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

8 hours ago