News Karnataka Kannada
Monday, April 29 2024
ಬೀದರ್

ಬೀದರ್‌ನ ಗೋರ್ಟಾದಲ್ಲಿ ಹುತಾತ್ಮರ ಸ್ಮಾರಕ ಲೋಕಾರ್ಪಣೆಗೊಳಿಸಿದ ಅಮಿತ್ ಷಾ

No one can stop caa from being implemented: Amit Shah
Photo Credit : News Kannada

ಬೀದರ್: ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾದಲ್ಲಿ ಹುತಾತ್ಮ ಸ್ಮಾರಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ. ಲೋಕಾರ್ಪಣೆಗೊಳಿಸಿದ್ದಾರೆ. ಗೋರ್ಟಾ ಕಾರ್ಯಕ್ರಮ ನಿಮಿತ್ತ ಅಮಿತ್ ಷಾ ಅವರು ಶನಿವಾರ ರಾತ್ರಿಯೇ ಬೀದರ್ ವಾಯುನೆಲೆ ಕೇಂದ್ರಕ್ಕೆ ಆಗಮಿಸಿ ಅಲ್ಲಿನ ಗೆಸ್ಟ್ ಹೌಸ್​​​ನಲ್ಲಿ ವಾಸ್ತವ್ಯ ಹೂಡಿದ್ದರು.

ಇಂದು ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಗೋರ್ಟಾ ಆಗಮಿಸಿ ಇಲ್ಲಿನ ಲಕ್ಷ್ಮಿ ದೇವಾಲಯದಲ್ಲಿ ಹಿರಿಯರೊಂದಿಗೆ ಸಂವಾದ ನಡೆಸಿ ಹುತಾತ್ಮ ಸ್ಮಾರಕ ಲೋಕಾರ್ಪಣೆ. ನಂತರ ನಡೆದ ಸಾರ್ವಜನಿಕ ಸಭೆಯನ್ನ ಉದ್ದೇಶಿಸಿ ಭಾಷಣ ಮಾಡಿದ್ದಾರೆ.

ವಿಜಯ ಸಂಕಲ್ಪ ಯಾತ್ರೆ ನಿಮಿತ್ತ ಮಾ.3ರಂದು ಬಸವಕಲ್ಯಾಣಕ್ಕೆ ಬಂದಿದ್ದ ಅಮಿತ್ ಷಾ ಇದೀಗ, ಗೋರ್ಟಾದಲ್ಲಿ ಸಿದ್ಧಗೊಂಡ ಹುತಾತ್ಮ ಸ್ಮಾರಕ ಲೋಕಾರ್ಪಣೆಗಾಗಿ ಆಗಮನ. ಅಮಿತ್ ಷಾ ಅವರು ತಿಂಗಳಲ್ಲೇ ಎರಡನೇ ಬಾರಿಗೆ ಗಡಿ ಜಿಲ್ಲೆ ಬೀದರ್​ಗೆ ಆಗಮಿಸಿದ್ದಾರೆ.

1947ರ ಆ.15 ರಂದು ದೇಶ ಸ್ವಾತಂತ್ರ್ಯ ಸಂಭ್ರಮದಲ್ಲಿದ್ದರು

ಈ ಭಾಗದ ಜನ ನಿಜಾಮನ ಕಪಿಮುಷ್ಟಿಯಿಂದ ಮುಕ್ತಿ ಪಡೆಯಲಿಲ್ಲ. ರಾಷ್ಟ್ರದ ಧ್ವಜ ಹಾರಿಸಿದರು ಅಪರಾಧ ಎನ್ನವ ಸ್ಥಿತಿ ನಿರ್ಮಾಣವಾಗಿತ್ತು. ಹೈದರಾಬಾದ್ ಕರ್ನಾಟಕ ಭಾಗ 13 ತಿಂಗಳ ನಂತರ ಸ್ವಾತಂತ್ರ್ಯ ಸಿಕ್ಕಿತು. 1948 ಮೇ 9 ರಂದು ನಿಜಾಮನ ಟೋಳಿ ಗೋರ್ಟಾಗೆ ಲಗ್ಗೆ ಇಟ್ಟು 200ಕ್ಕೂ ಅಧಿಕ ಜನರನ್ನು ಹತ್ಯೆ ಮಾಡಲಾಗಿತ್ತು. ಈ ದಿನದ ನೆನಪಿಗಾಗಿ 2014ರಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾದಿಂದ ಗೋರ್ಟಾದಲ್ಲಿ ಹುತಾತ್ಮ ಸ್ಮಾರಕ ರೂಪುರೇಷೆ ಸಿದ್ದಪಡಿಸಿ ಚಾಲನೆ ನೀಡಿತು. ಎಂಟು ವರ್ಷಗಳ ಹಿಂದೆ ಅಮಿತ್ ಷಾ ಭೂಮಿಪೂಜೆ ನೆರವೇರಿಸಿದರು. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿತು. ಚುನಾವಣೆ ಹೊಸ್ತಿಲಲ್ಲಿ ಇರುವಾಗ ಇದೀಗ ಉಳಿದ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಗೊಳಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಅಮಿತ್ ಷಾ ಅವರೊಂದಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಭಗವಂತ ಖೂಬಾ, ಪ್ರಭು ಚವ್ಹಾಣ್ ಇತರರು ಭಾಗಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು