ಬೀದರ್: ಹಿರಿಯ ಅಧಿಕಾರಿಯವರ ಮಾರ್ಗದರ್ಶನದಂತೆ ಎನ್.ಹೆಚ್-65 ರ ರಸ್ತೆ ಮೂಲಕ ಸರ್ಕಾರದಿಂದ ವಿತರಿಸಲಾದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಮಂಠಾಳ ಪೊಲೀಸ್ ಠಾಣೆಯ ಪಿ.ಎಸ್.ಐ ಮತ್ತು ಸಿಬ್ಬಂದಿಗಳ ತಂಡ 17 ಲಕ್ಷಕ್ಕೂ ಅಧಿಕ ಮೌಲ್ಯದ 175 ಕ್ವಿಂಟಲ್ ಅಕ್ಕಿ ಮತ್ತು ಒಂದು ಲಾರಿ ಜೊತೆಗೆ ಇಬ್ಬರೂ ಆರೋಪಿಗಳಿಗೆ ಬಂಧಿಸಿದ್ದಾರೆ…
ಗಡಿ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳಾ ಪೊಲೀಸ ಠಾಣೆಯ
ವ್ಯಾಪ್ತಿಯಲ್ಲಿ ಬರುವ ಮನ್ನಳ್ಳಿ ಗ್ರಾಮದ ಹತ್ತಿರ ಎನ್.ಹೆಚ್-65 ರ ರಸ್ತೆ ಮೂಲಕ ಸರ್ಕಾರದಿಂದ ವಿತರಿಸಲಾದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿರುವ ಮಾಹಿತಿಯಂತೆ, ಮಂಠಾಳಾ ಪೊಲೀಸ್ ಠಾಣೆಯ ಪಿ.ಎಸ್.ಐ ರಾಜಕುಮಾರ, ರವರು ತಮ್ಮ ಸಿಬ್ಬಂದಿಯವರೊಂದಿಗೆ ಮನ್ನಳಿ ಕ್ರಾಸ್ ಹತ್ತಿರ ಎನ್.ಹೆಚ್-65 ಮೇಲೆ ಬಸವಕಲ್ಯಾಣ ತಾಲೂಕಿನ ಆಹಾರ ನಿರೀಕ್ಷಕರಾದ ನಾಗರಾಜ ಪಾಟೀಲ್, ರವರ ಸಮಕ್ಷಮದಲ್ಲಿ ಲಾರಿಯನ್ನು ವಶಕ್ಕೆ ಪಡೆದು ಲಾರಿಯಲ್ಲಿದ್ದ 175 ಕ್ವಿಂಟಲ್ ಅಕ್ಕಿ ಅದರ ಅಂದಾಜು ಮೌಲ್ಯ 5,95,000=00 ರೂಪಾಯಿ ಮತ್ತು ಒಂದು ಲಾರಿ ಅದರ ಅಂದಾಜು ಮೌಲ್ಯ 12,00,000=00 ರೂಪಾಯಿ , ಹೀಗೆ ಒಟ್ಟು 17,95,000=00 ರೂಪಾಯಿ ಬೆಲೆಬಾಳುವ ಅಕ್ಕಿ ಮತ್ತು ಲಾರಿ ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ದ ಮಂಠಾಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ಪಾಲ್ಗೊಂಡ ಮಂಠಾಳ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಶ್ಲಾಘಿಸಿದ್ದಾರೆ.