News Karnataka Kannada
Monday, May 13 2024
ಬೀದರ್

ಸಕಾರಾತ್ಮಕ ಬದುಕು, ಚಿಂತನೆಯಿಂದ ಮಾನವನಾಗಲು ಸಾಧ್ಯ : ಭಗವಂತ ಖೂಬಾ

Bhagavanth Khooba
Photo Credit :

ಬೀದರ್: ಸಕಾರಾತ್ಮಕ ಬದುಕು, ಚಿಂತನೆಯಿಂದ ಮಾನವನಾಗಲು ಸಾಧ್ಯವಿದೆ ಎಂದು ಕೇಂದ್ರ ಸರ್ಕರದ ನವಿಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅಭಿಪ್ರಾಯ ಪಟ್ಟರು.

ಭಾನುವಾರ ನಗರದ ರಸ್ತೆಯಲ್ಲಿರುವ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರಿಯ ಜನವಾಡಾವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮ ಅವರಣದಲ್ಲಿ ಕೇಂದ್ರದಿಂದ ಆಯೋಜಿಸಲಾಗಿದ್ದ ದೀಪಾವಳಿ ಕಾರ್ಯಕ್ರಮ, ಸ್ನೇಹಮಿಲನ ಹಾಗೂ ಸಮರ್ಪಿತ ಬಿ.ಕೆ ಸಹೋದರಿಯರ ಜನ್ಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತ ಒಂದು ಕಾಲದಲ್ಲಿ ವಿಶ್ವಕ್ಕೆ ಗುರುವಾದ ದೇಶ. ಇಲ್ಲಿ ಋಷಿ, ಮಹಾತ್ಮರು, ಸಾಧು, ಸಂತರು ಬಾಳಿ ಬದುಕಿದ ದೇಶದಾಗಿದೆಶಿಂತಹ ನೆಲದಲ್ಲಿ ಹುಟ್ಟಿರುವ ನಾವೆಲ್ಲರು ನಿಜಕ್ಕೂ ಸುದೈವಿಗಳು. ಆದರೆ, ಇಂದು ಪಾಶ್ಚಾತ್ಯರ ಪ್ರಭಾವಕ್ಕೆ ಒಳಗಾಗಿ ಧರ್ಮ, ಆಚಾರ, ವಿಚಾರ, ಸಂಸ್ಕøತಿ, ಪರೆಂಪರೆ ಎಲ್ಲವನ್ನು ಮರೆತು ಅರ್ಥಹೀನ, ಉದ್ದೇಶವಲ್ಲದ ಖಾಲಿ ಕೊಡದಂತಹ ಜೀವನ ಸಾಗಿಸುತ್ತಿದ್ದೇವೆ. ಹಣ ಹಾಗೂ ಅಧಿಕಾರದ ಬೆನ್ನ ಹಿಂದೆ ಬಿದ್ದು ತಾನು ಎಲ್ಲರುವೆ ಎಂಬೂದನ್ನು ಸಹ ಮರೆತು ಬಿಟ್ಟಿದ್ದಾನೆ.

ಇದು ಆತನ ಅವನತಿಗೆ ಕಾರಣವಾಗಿತ್ತಿದೆ ಎಂಬುದನ್ನು ಸಹ ಅರಿಯುತ್ತಿಲ್ಲ. ಬರೀ ಭ್ರಮನಿರಸದಲ್ಲಿ ಕಾಲ ಕಳೆಯುತ್ತಿರುವನು. ಇದು ಬದಲಾವಣೆ ಅಗಬೇಕಾದರೆ ಯಾವ ಸ್ವಾರ್ಥ, ಯಾವ ದ್ವೇಷವಿಲ್ಲದ, ಪವಿತ್ರ ಆತ್ಮಗಳಿಂದ ಕೂಡಿರುವ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರಿಯ ಸೇವೆಯಲ್ಲಿ ಅಥವಾ ಅವರ ಮಾರ್ಗದರ್ಶನದಲ್ಲಿ ನಡೆದರೆ ಖಂಡಿತ ಜೀವನದಲ್ಲಿ ಶಾಂತಿ ಹಾಗೂ ನೆಮ್ಮದಿ ಸಾಧ್ಯವಿದೆ ಎಂದರು.

ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೆಯಿ ಅವರು ಸದಾ ಈಶ್ವರಿಯ ಸೇವೆ ಬಗ್ಗೆ ನೆನಪು ಮಾಡುತ್ತಿದ್ದರು. ಹಾಲಿ ಪ್ರಧಾನಿ ನರೇಂದ್ರ ಮೋದಿಜೀ ಅವರು ಓರ್ವ ಯೋಗಿಯಾಗಿದ್ದು, 135 ಕೋಟಿ ಜನರಿಗೆ ತಮ್ಮ ಜೀವನ ತ್ಯಾಗ ಮಾಡಿರುವ ಮಹಾನ ಸಂತ. ಅಂಥವರ ಕೈಯಲ್ಲಿ ನಮ್ಮಂಥವರಿಗೆ ಕೆಲಸ ಮಾಡುವ ಅವಕಾಶ ಒದಗಿ ಬಂದಿರುವುದು ನನ್ನ ಸೌಭಾಗ್ಯ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು