ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕೊಳಗಲ್ ಗ್ರಾಮದಲ್ಲಿ 5 ವರ್ಷದ ಮಗನನ್ನು ಸಾಯಿಸಿ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತ ವ್ಯಕ್ತಿ ತನ್ನ ಪತ್ನಿ ಸಾವಿನಿಂದ ಮನನೊಂದು ಈ ಕೃತ್ಯವೆಸಗಿದ್ದಾರೆ. ಈಡಿಗೇರ್ ಯಂಕಪ್ಪ(32) ಹಾಗೂ ಅವರ ಪುತ್ರ ವಿಜಯ ಪ್ರಕಾಶ್(5) ಮೃತಪಟ್ಟವರು.
ಯಂಕಪ್ಪನ ಪತ್ನಿ ಹುಲಿಗೆಮ್ಮ ಸೆ. 14ರಂದು ಕೊಳಗಲ್ ಸಮೀಪ ಹೆಚ್.ಎಲ್.ಸಿ. ಕಾಲುವೆಗೆ ಆಟೋ ಪಲ್ಟಿಯಾಗಿ ನೀರು ಪಾಲಾಗಿದ್ದರು. ನಿಧನದಿಂದ ಯಂಕಪ್ಪ ನೊಂದುಕೊಂಡಿದ್ದರು. ಮಂಗಳವಾರ ಮನೆಯಲ್ಲಿ ನೀರಿನ ಟಬ್ ನಲ್ಲಿ ಕಿರಿಯ ಮಗ ವಿಜಯ್ ಪ್ರಕಾಶ್ ನನ್ನು ಮುಳುಗಿಸಿದ್ದಾರೆ. ಉಸಿರುಗಟ್ಟಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ನಂತರ ಯಂಕಪ್ಪ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಬ್ಬ ಮಗ ಸಂದೀಪ್ ಪಾರಾಗಿದ್ದಾನೆ.
ಸಹಾಯವಾಣಿಗೆ ಕರೆ ಮಾಡಿ:
ನೀವು ಆತ್ಮಹತ್ಯೆಯ ಯೋಚನೆ ಮಾಡುತ್ತಿದ್ದರೆ ಅಥವಾ ಅಂತವರ ಕುರಿತು ನಿಮಗೆ ತಿಳಿದಿದ್ದರೆ, ಸಹಾಯ ಅಗತ್ಯವಿರುವ ಯಾರಾದರೂ, ಕರೆ ಮಾಡಿ ಸುಶೇಗ್ ಚಾರಿಟೇಬಲ್ ಟ್ರಸ್ಟ್ 0824-2983444 ಗೆ ಏಕೆಂದರೆ ಪ್ರತಿಯೊಬ್ಬರ ಜೀವವು ಅಮೂಲ್ಯವಾದ್ದದ್ದು.