News Karnataka Kannada
Saturday, May 04 2024
ಬಳ್ಳಾರಿ

ಬಳ್ಳಾರಿ: ಯುವಜನತೆಗೆ ಜನಪದ ರೂಪಗಳ ಪರಿಚಯವಿರಬೇಕು ಎಂದ ಸಿ ಅಮರೇಶಪ್ಪ

News
Photo Credit : News Kannada

ಬಳ್ಳಾರಿ: ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷರಾಗಿ ಕುರುಗೋಡಿನ ಚಾನಾಳ್ ಅಮರೇಶಪ್ಪ ಆಯ್ಕೆಯಾಗಿದ್ದು, ಜಿಲ್ಲಾಧ್ಯಕ್ಷ ಸಿ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ.

ಅಧ್ಯಕ್ಷ ಚನಾಳ ಅಮರೇಶಪ್ಪ ಮಾತನಾಡಿ, ಆಧುನಿಕತೆಯ ಯುಗದಲ್ಲಿ ಜನಪದ ಕಲೆಯನ್ನು ಮರೆಯುತ್ತಿದ್ದಾರೆ. ಜನಪದ ಕತೆ, ಹಾಡು, ಆಟ ಅವಸಾನದ ಅಂಚಿನಲ್ಲಿದ್ದು, ಕರ್ನಾಟಕದ ವಿವಿಧ ಮೂಲೆಗಳಲ್ಲಿ ಅಡಗಿರುವ ಜನಪದ ಸಾಹಿತ್ಯ ಕಲೆಗಳನ್ನು ಗುರುತಿಸಿ ಬೆಳಕಿಗೆ ತರುವ ಜವಾಬ್ದಾರಿ ಎಲ್ಲರ ಮೇಲಿದೆ.

ಈ ಕೆಲಸವನ್ನು ಪರಿಚಿತ ಕಲಾವಿದರು ಮಾಡಿ ಇಂದಿನ ಮಕ್ಕಳಿಗೆ, ಯುವಕರಿಗೆ ಪರಿಚಯಿಸುವ ಅಗತ್ಯವಿದೆ. ಈ ಒಂದು ಕಾರ್ಯಕ್ಕಾಗಿ ನನ್ನನ್ನು ಗುರುತಿಸಿ ತಾಲೂಕು ಅಧ್ಯಕ್ಷರನ್ನಾಗಿ ನೇಮಿಸಿದ ರಾಜ್ಯಾದ್ಯಂತ ಕರ್ನಾಟಕ ಜಾನಪದ ಪರಿಷತ್ತಿನ ಪ್ರತಿನಿಧಿಗಳಿಗೆ ನಾನು ಆಭಾರಿಯಾಗಿದ್ದೇನೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು