News Karnataka Kannada
Thursday, May 02 2024
ಬಳ್ಳಾರಿ

ಖಾತೆ ನೀಡಿದ್ದು ಸಮಾಧಾನವಿಲ್ಲ ಆದರೂ ಅಸಮಾಧಾನವಿಲ್ಲ ಎಂದ ಸಚಿವ ಶ್ರೀರಾಮುಲು

Sri Ramulu
Photo Credit :

ಬಳ್ಳಾರಿ, – ತಮಗೆ ನೀಡಿರುವ ಖಾತೆಯಿಂದ ಸಮಾಧಾನವೂ ಇಲ್ಲ, ಅಸಮಾ ಧಾನವೂ ಇಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಪಕ್ಷದ ವರಿಷ್ಠರು ಉತ್ತಮ ಸ್ಥಾನ ನೀಡುವ ನಿರೀಕ್ಷೆ ಇದೆ ಎಂದರು.
ತಾವು ಉಪಮುಖ್ಯಮಂತ್ರಿಯಾಗಬೇಕು ಎಂಬುದು ಜನರ ನಿರೀಕ್ಷೆಯಾಗಿತ್ತು. ಆದರೆ ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಹೇಳಿದರು. ಕಳೆದ 30 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಜನರ ಮಧ್ಯೆ ಬೆಳೆದು ಬಂದವನು. ಜನರ ಆಶೀರ್ವಾದ ಇರುವವರೆಗೂ ಇರುತ್ತೇನೆ. ಈಗಾಗಲೇ ಸಚಿವ, ಶಾಸಕ ಹಾಗೂ ಸಂಸದರಾಗಿ ಸೇವೆ ಸಲ್ಲಿಸಿದ ಅನುಭವ ಇದೆ. ರಾಜಕೀಯಕ್ಕೆ ಬಂದಿದ್ದೇ ಒಂದು ಸವಾಲು. ಹೀಗಾಗಿ ತಮಗೆ ನೀಡಿರುವ ಖಾತೆಯ ಜವಾಬ್ದಾರಿ ನಿರ್ವಹಿಸುವುದಾಗಿ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು