ಕಲಬುರಗಿ: ಕಲಬುರಗಿ ಹೊರವಲಯದ ಕುಸುನೂರುನಲ್ಲಿರುವ ಶ್ರೀ ಮಾಧವ ಗೋಶಾಲೆ ಹಾಗೂ ಆಳಂದ ರಸ್ತೆಯಲ್ಲಿರುವ ನಂದಿ ಅನಿಮಲ್ ವೆಲ್ ಫೇರ್ ಸೊಸೈಟಿಗೆ ಪಶು ಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಗೋವುಗಳಿಗೆ ಪೂಜೆ ಸಲ್ಲಿಸಿ, ಹಸುಗಳ ಆರೋಗ್ಯದ ಕುರಿತು ಗೋಶಾಲೆ ಮಾಲೀಕರಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ. ಬಿ.ಎಸ್. ಪಾಟೀಲ್ , ಹಿರಿಯ ಸಹಾಯಕ ನಿರ್ದೇಶಕ ಡಾ. ಎಸ್. ಕೆ. ಟಕ್ಕಳಕಿ, ಸಹಾಯಕ ನಿರ್ದೇಶಕ ಡಾ. ರಾಜು ದೇಶಮುಖ, ಹಿರಿಯ ಪಶು ವೈದ್ಯಾಧಿಕಾರಿ ಡಾ. ವೈಜುನಾಥ ಮಾಮಣಿ, ರೇವೂರು ಬ್ರಹ್ಮಲಿಂಗೇಶ್ವರ ಮಠದ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ, ಗುರು ಸಂಸ್ಥಾನ ಹಿರೇಮಠದ ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಗೋಶಾಲೆಯ ಮಾಲೀಕ ಕೇಶವ ಮೋಟಗಿ ಸೇರಿದಂತೆ ಸಿಬ್ಬಂದಿಗಳು ಇದ್ದರು.