ಕಲಬುರಗಿ: ವಿವಿಧ ಸಂಘಟನೆಗಳು ಸೇರಿದಂತೆ ಕರೆ ನೀಡಲಾದ ಭಾರತ್ ಬಂದ್ ಹಿನ್ನೆಲೆಯಲ್ಲಿ ಕಲಬುರಗಿ ನಗರದಲ್ಲಿ ಏಕಾಏಕಿ ಸಾರಿಗೆ ಸಂಚಾರ ಸ್ಥಗಿತಗೊಳಿಸಲಾಗಿದೆ.
ಬೆಳಿಗ್ಗೆ ಕನಾ೯ಟಕ ಯುವ ಶಕ್ತಿ ಸಂಘಟನೆ ಸೇರಿದಂತೆ ವಿವಿಧ ರೈತ ಪರ ಪ್ರಗತಿಪರ ಸಂಘಟನೆಗಳಿಂದ ಕೇಂದ್ರ ಬಸ್ ನಿಲ್ದಾಣದ ಎದುರಿಗೆ ಪ್ರತಿಭಟನೆ ಮಾಡಲಾಗಿದೆ. ಸಾರಿಗೆ ಸಂಚಾರವನ್ನು ಒತ್ತಾಯಪೂರ್ವಕವಾಗಿ ಪ್ರತಿಭಟನಾಕಾರರು ಸ್ಥಗೀತಗೊಳಿಸಿದ್ದು, ಪ್ರಯಾಣಿಕರಿಗೆ ತೊಂದರೆಯುಂಟಾಗಿದೆ. ಸಾರಿಗೆ ಸಂಚಾರ ಸ್ಥಗೀತ ಗೊಂಡ ಪರಿಣಾಮವಾಗಿ ಬಸ್ ನಿಲ್ದಾಣದಿಂದ ಗಂಟು ಮೂಟೆಗಳ ಸಮೇತ ಪ್ರಯಾಣಿಕರು ಹೊರಟು ಹೋಗಿದ್ದಾರೆ.
ಇನ್ನೂ ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪುರ ಪಟ್ಟಣದಲ್ಲಿ ಸಹ ಪ್ರತಿಭಟನೆ ನಡೆಸಲಾಗಿದೆ. ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.