News Karnataka Kannada
Friday, May 17 2024
ಕಲಬುರಗಿ

ಕಲಬುರಗಿ : ವಿಜಯದಶಮಿ ಅಂಗವಾಗಿ ಬನ್ನಿ ಹಂಚುವ ಕಾಯ೯ಕ್ರಮ

Photo Credit :

ಕಲಬುರಗಿ: ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಪ್ರೀತಿ,ವಿಶ್ವಾಸ ಹಾಗೂ ಸಹಬಾಳ್ವೆ ಮೂಲಕ ಜೀವನ ನಡೆಸಬೇಕೆಂದು ವೀರಶೈವ ಲಿಂಗಾಯತ ಬಂದು ಸಮಾಜ ಶಹಾಬಜಾರ ಕಾಯ೯ದಶಿ೯ ಹಾಗೂ ವಕೀಲರಾದ ಈರಣ್ಣಾ ಗೊಳೆದ ಹೇಳಿದರು.

ಅವರು ನಗರದ ಶಹಾಬಜಾರ ಬಡಾವಣೆಯ ಮರಗಮ್ಮಾ ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ ಬನ್ನಿ ಮುರಿಯುವ ಕಾಯ೯ಕ್ರಮ ಶಸ್ತ್ರಾಸ್ತ್ರಗಳ ಪೂಜೆ ಸಲ್ಲಿಸಿ, ನಂತರ ಮಾತನಾಡಿದರು.

ಅನಾದಿಕಾಲದಿಂದಲೂ ನಮ್ಮ ಗುರು ಹಿರಿಯರು ವಿಜಯದಶಮಿ ಅಂಗವಾಗಿ ಬನ್ನಿ ಮುರಿಯುವ ವಿಶೇಷ ಕಾಯ೯ಕ್ರಮವನ್ನು ನಡೆಸಿಕೊಂಡು ಬಂದಿದ್ದಾರೆ ಎಂದರು.

ನಮ್ಮ ಹಿಂದೂ ಧರ್ಮದ ಪವಿತ್ರ ಹಬ್ಬವಾದ ದಸರಾ ಪ್ರಯುಕ್ತ ಈ ಕಾಯ೯ಕ್ರಮವನ್ನು ಕಾಲಕ್ರಮೇಳ ಮುಂದಿನ ಪಿಳೀಗೆಯೂ ನಡೆಸಿಕೊಂಡು ಹೋಗಬೇಕೆಂದು ತಿಳಿಸಿದರು.

ನಿಮ್ಮೆಲ್ಲರ ಜೀವನದಲ್ಲಿ ಸುಖ-ಶಾಂತಿ, ಆಯಸ್ಸು-ಆರೋಗ್ಯ, ಸಿರಿ-ಸಂಪತ್ತು ಆ ತಾಯಿ ಚಾಮುಂಡೇಶ್ವರಿ ದಯಪಾಲಿಸಲಿ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಖೇಮಜಿ, ಶಿವಾನಂದ ಬಂಡಕ, ಪ್ರಭುಲಿಂಗ ಹಾದಿಮನಿ, ಮಲ್ಲಿಕಾರ್ಜುನ ಓಕಳಿ, ವೈಜನಾಥ ಪಾಟೀಲ್, ಸುಭಾಷ್ ಟೇಲರ್, ಶಂಕರ ಜಾಧವ, ಸುಭಾಷ್ ಹೊದಲೂರ, ಶರಣು ಅವರಾದಿ, ಜಗಧೀಶ ಗೊಳೆದ,ಶರಣರಾಜ ಖೇಳೆಗಾಂವಕರ ಸೇರಿದಂತೆ ಸಮಾಜದ ಯುವ ಮುಖಂಡರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು