ಕಲಬುರಗಿ: ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಪ್ರೀತಿ,ವಿಶ್ವಾಸ ಹಾಗೂ ಸಹಬಾಳ್ವೆ ಮೂಲಕ ಜೀವನ ನಡೆಸಬೇಕೆಂದು ವೀರಶೈವ ಲಿಂಗಾಯತ ಬಂದು ಸಮಾಜ ಶಹಾಬಜಾರ ಕಾಯ೯ದಶಿ೯ ಹಾಗೂ ವಕೀಲರಾದ ಈರಣ್ಣಾ ಗೊಳೆದ ಹೇಳಿದರು.
ಅವರು ನಗರದ ಶಹಾಬಜಾರ ಬಡಾವಣೆಯ ಮರಗಮ್ಮಾ ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ ಬನ್ನಿ ಮುರಿಯುವ ಕಾಯ೯ಕ್ರಮ ಶಸ್ತ್ರಾಸ್ತ್ರಗಳ ಪೂಜೆ ಸಲ್ಲಿಸಿ, ನಂತರ ಮಾತನಾಡಿದರು.
ಅನಾದಿಕಾಲದಿಂದಲೂ ನಮ್ಮ ಗುರು ಹಿರಿಯರು ವಿಜಯದಶಮಿ ಅಂಗವಾಗಿ ಬನ್ನಿ ಮುರಿಯುವ ವಿಶೇಷ ಕಾಯ೯ಕ್ರಮವನ್ನು ನಡೆಸಿಕೊಂಡು ಬಂದಿದ್ದಾರೆ ಎಂದರು.
ನಮ್ಮ ಹಿಂದೂ ಧರ್ಮದ ಪವಿತ್ರ ಹಬ್ಬವಾದ ದಸರಾ ಪ್ರಯುಕ್ತ ಈ ಕಾಯ೯ಕ್ರಮವನ್ನು ಕಾಲಕ್ರಮೇಳ ಮುಂದಿನ ಪಿಳೀಗೆಯೂ ನಡೆಸಿಕೊಂಡು ಹೋಗಬೇಕೆಂದು ತಿಳಿಸಿದರು.
ನಿಮ್ಮೆಲ್ಲರ ಜೀವನದಲ್ಲಿ ಸುಖ-ಶಾಂತಿ, ಆಯಸ್ಸು-ಆರೋಗ್ಯ, ಸಿರಿ-ಸಂಪತ್ತು ಆ ತಾಯಿ ಚಾಮುಂಡೇಶ್ವರಿ ದಯಪಾಲಿಸಲಿ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಖೇಮಜಿ, ಶಿವಾನಂದ ಬಂಡಕ, ಪ್ರಭುಲಿಂಗ ಹಾದಿಮನಿ, ಮಲ್ಲಿಕಾರ್ಜುನ ಓಕಳಿ, ವೈಜನಾಥ ಪಾಟೀಲ್, ಸುಭಾಷ್ ಟೇಲರ್, ಶಂಕರ ಜಾಧವ, ಸುಭಾಷ್ ಹೊದಲೂರ, ಶರಣು ಅವರಾದಿ, ಜಗಧೀಶ ಗೊಳೆದ,ಶರಣರಾಜ ಖೇಳೆಗಾಂವಕರ ಸೇರಿದಂತೆ ಸಮಾಜದ ಯುವ ಮುಖಂಡರು ಭಾಗವಹಿಸಿದ್ದರು.