ಹುಬ್ಬಳ್ಳಿ: ರೇಣುಕಾಸ್ವಾಮಿ ಕೊಲೆ ಪ್ರಕರಣ, ನಟ ದರ್ಶನ ಮತ್ತು ಗ್ಯಾಂಗ್ ಬಂಧನವಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ನಾನು ಕೂಡಾ ದರ್ಶನ ಜೊತೆ ಎರಡು ಚಿತ್ರ ಮಾಡಿದ್ದೇನೆ. ದರ್ಶನ ಗೆ ನಾನು ಯಾಕೆ ಟಾಂಗ್ ಕೊಡಬೇಕು. ಮುಂದೆ ಅನಾಹುತ ಆಗುತ್ತದೆ ಎಂದು ಹೇಳಿದ್ದೆ, ಆದರೂ ಕೇಳಲಿಲ್ಲ ಸಧ್ಯ ಹೀಗೆ ಆಗಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮುಂದೆ ನೀವು ನೋಡತಾ ಇರಿ ಇನ್ನೂ ಈ ಒಂದು ಪ್ರಕರಣ ಎಲ್ಲೇಲ್ಲಿಗೆ ಹೋಗುತ್ತದೆ. ದರ್ಶನ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಅವರ ಮಗನಿಗೆ ಶಕ್ತಿ ಕೊಡಲಿ. ಯಾರೇ ಕೊಲೆಗಾರರಾಗಿದ್ದರೂ ಕಠಿಣ ಶಿಕ್ಷೆಯಾಗಲಿ.
ಇತ್ತ ಗಂಡನನ್ನು ಕಳೆದುಕೊಂಡ ರೇಣುಕಾ ಸ್ವಾಮಿಗೆ ಪತ್ನಿ ಗೆ ದುಃಖ ವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ. ಸರ್ಕಾರ ಮೌನವಾಗಿ ಸುಮ್ಮನೆ ಕುಳಿತುಕೊಳ್ಳುದೇ. ಸಾಮಾಜಿಕ ಜಾಲ ತಾಣಗಳ ಮೇಲೆ ನಿಗಾ ವಹಿಸಬೇಕು ಎಂದರು.

