ಕರ್ನಾಟಕದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಆಗಸ್ಟ್ 6 ರವರೆಗೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್​ ಘೋಷಣೆ ಮಾಡಲಾಗಿದ್ದು, ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​, ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ ಜಿಲ್ಲೆಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಕೂಡ ಮಳೆಯಾಗಲಿದೆ.

ಆಗುಂಬೆ, ಮಾಣಿ, ಕ್ಯಾಸಲ್​ರಾಕ್, ಕಾರ್ಕಳ, ಉಪ್ಪಿನಂಗಡಿ, ಮಂಕಿ, ಪುತ್ತೂರು, ಕಮ್ಮರಡಿ, ಬೆಳ್ತಂಗಡಿ, ಪಣಂಬೂರು, ಮುಲ್ಕಿ, ಭಾಗಮಂಡಲ, ಮೂಡಿಗೆರೆ, ಧರ್ಮಸ್ಥಳ, ಕದ್ರಾ, ಕೊಲ್ಲೂರು, ಮಂಗಳೂರು, ಅಂಕೋಲಾ, ಶೃಂಗೇರಿಯಲ್ಲಿ ಮಳೆಯಾಗಿದೆ.

ಲೋಂಡಾ, ತರೀಕೆರೆ, ಲಿಂಗನಮಕ್ಕಿ, ಕುಮಟಾ, ಜಯಪುರ, ಶಿರಾಲಿ, ಸುಳ್ಯ, ಕಳಸ, ಕೊಪ್ಪ, ನಾಪೊಕ್ಲು, ಕೊಟ್ಟಿಗೆಹಾರ, ಗೋಕರ್ಣ, ಕೋಟ, ಹುಂಚದಕಟ್ಟೆ, ಕಾರವಾರ, ಪೊನ್ನಂಪೇಟೆ, ತ್ಯಾಗರ್ತಿ, ಸೋಮವಾರಪೇಟೆ, ಎನ್​ಆರ್​ಪುರ, ಬನವಾಸಿ, ಹಾರಂಗಿ, ಕುಶಾಲನಗರ, ಹಳಿಯಾಳ, ಕೆಆರ್​ ನಗರ, ಕೂಡಲಸಂಗಮ, ಸೇಡಬಾಳ, ದಾವಣಗೆರೆ, ಕೃಷ್ಣರಾಜಸಾಗರದಲ್ಲಿ ಮಳೆಯಾಗಿದೆ.