Bengaluru 22°C
Ad

ವಾರೆಂಟ್ ಜಾರಿ ಮಾಡಲು ಲಂಚ ಪಡೆದ ಕಾನ್ಸ್ಟೇಬಲ್: ಲೋಕಾಯುಕ್ತರ ವಶಕ್ಕೆ

ವಾರೆಂಟ್ ಜಾರಿ ಮಾಡಲು ಎರಡು ಸಾವಿರ ರೂ. ಲಂಚ ಪಡೆಯುತ್ತಿದ್ದ ದಾವಣಗೆರೆ ಬಡಾವಣೆ ಪೊಲೀಸ್ ​ಠಾಣೆ​ ಪೇದೆ ಹನುಮಂತಪ್ಪ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ದಾವಣಗೆರೆ: ವಾರೆಂಟ್ ಜಾರಿ ಮಾಡಲು ಎರಡು ಸಾವಿರ ರೂ. ಲಂಚ ಪಡೆಯುತ್ತಿದ್ದ ದಾವಣಗೆರೆ ಬಡಾವಣೆ ಪೊಲೀಸ್ ​ಠಾಣೆ​ ಪೇದೆ ಹನುಮಂತಪ್ಪ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಸರಸ್ವತಿ ನಗರದ‌ ನಿವಾಸಿ ಲಕ್ಕಪ್ಪ ಅಂಗಡಿ ಎಂಬುವರು ಸೈಯದ್ ತಹಿರುದ್ದೀನ್ ಎಂಬುವರ ವಿರುದ್ಧ ನ್ಯಾಯಾಲಯದಲ್ಲಿ ಚೆಕ್​ಬೌನ್ಸ್​ ಪ್ರಕರಣ ದಾಖಲಿಸಿದ್ದರು.

ಈ ಸಂಬಂಧ ಸೈಯದ್ ತಹಿರುದ್ದೀನ್ ಅವರ ವಿರುದ್ಧ ವಾರಂಟ್​ ನೀಡುವಂತೆ ಪೊಲೀಸ್​ ಪೇದೆ ಹನಮಂತಪ್ಪ ಅವರಿಗೆ ಲಕ್ಕಪ್ಪ ಅಂಗಡಿ ವಿನಂತಿಸಿದ್ದರು.

ವಾರಂಟ್​ ಜಾರಿ ಮಾಡಲು ಲಕ್ಕಪ್ಪ ಅಂಗಡಿ ಅವರ ಬಳಿ ಪೊಲೀಸ್​ ಪೇದೆ ಹನಮಂತಪ್ಪ ಪೋನ್ ಪೇ ಮೂಲ‌ಕ ಎರಡು ಸಾವಿರ ರೂ. ಬೇಡಿಕೆ ಪಡೆಯುತ್ತಿದ್ದರು.

ಈ ವೇಳೆ ದಾವಣಗೆರೆ ಲೋಕಾಯುಕ್ತ ಎಸ್​ಪಿ ಎಂಎಸ್ ಕೌಲಾಪುರೆ ನೇತ್ರತ್ವದಲ್ಲಿ ಡಿವೈಎಸ್ಪಿ ಕಲಾವತಿ ಇನ್ಸ್​ಪೇಕ್ಟರ್​​ಗಳಾದ ಹೆಚ್​ಎಸ್​ ರಾಷ್ಟ್ರಪತಿ ಹಾಗೂ ಮಧುಸೂದನ್ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

Ad
Ad
Nk Channel Final 21 09 2023
Ad