Bengaluru 29°C
Ad

ಅಣ್ಣೂರುಕೇರಿ ಆಪರೇಷನ್ ಜಾಂಬವಂತ ಯಶಸ್ವಿ : ಮೂಲೆಹೊಳೆ ಅರಣ್ಯಕ್ಕೆ ಸ್ಥಳಾಂತರ

ಅಣ್ಣೂರುಕೇರಿ ಗ್ರಾಮದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಕರಡಿಯನ್ನ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ, ಸೆರೆಹಿಡಿದ ಕರಡಿಯನ್ನು ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಮೂಲೆಹೊಳೆ ಅರಣ್ಯ ವಲಯಕ್ಕೆ ಸ್ಥಳಾಂತರಿಸಲಾಗಿದೆ.

ಗುಂಡ್ಲುಪೇಟೆ: ಅಣ್ಣೂರುಕೇರಿ ಗ್ರಾಮದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಕರಡಿಯನ್ನ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ, ಸೆರೆಹಿಡಿದ ಕರಡಿಯನ್ನು ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಮೂಲೆಹೊಳೆ ಅರಣ್ಯ ವಲಯಕ್ಕೆ ಸ್ಥಳಾಂತರಿಸಲಾಗಿದೆ.

Ad
300x250 2

ಇಂದು ಬೆಳ್ಳಂಬೆಳಗ್ಗೆ ಅಣ್ಣೂರುಕೇರಿ ಗ್ರಾಮದ ಒಳಗೆ ತಟ್ಟನೆ ಪ್ರತ್ಯಕ್ಷವಾಗಿದ್ದ ಕರಡಿಯನ್ನ ಕಂಡ ಗ್ರಾಮಸ್ಥರು ಆತಂಕಕ್ಕೀಡಾಗಿದ್ದರು, ಹಠಾತ್ ದಾಳಿ ನಡೆಸಿದ್ರೆ ಏನು ಗತಿ ಎಂದು ಮನೆಯೊಳಗೆ ಇದ್ದ ಗ್ರಾಮಸ್ಥರು ಕರಡಿಯನ್ನ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ರು,

೨

ಗ್ರಾಮಸ್ಥರಿಂದ ಮಾಹಿತಿ ಪಡೆದು ಕಾರ್ಯಚರಣೆಗಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಕೆಲವೇ ಗಂಟೆಗಳಲ್ಲಿ ಕರಡಿಯನ್ನ ಖೆಡ್ಡಾಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ. ಸೆರೆಯಾದ ಕರಡಿಯನ್ನ ಸುರಕ್ಷಿತವಾಗಿ ಮೂಲೆಹೊಳೆ ಅರಣ್ಯ ವಲಯದಲ್ಲಿ ಬಿಡಲಾಗಿದೆ.

Ad
Ad
Nk Channel Final 21 09 2023
Ad