Bengaluru 22°C
Ad

ಕಾರ್ ಗೆ ಕಂಟೇನರ್ ಡಿಕ್ಕಿ: ಪ್ರಾಣಾಯಪಾಯದಿಂದ‌ ಪಾರಾದ ಚನ್ನವೀರ ಶಿವಾಚಾರ್ಯರು

ಜಿಲ್ಲೆಯ ಹಾರಕೂಡ‌ ಮಠದ ಚನ್ನವೀರ ಶಿವಾಚಾರ್ಯರು ಪ್ರಯಾಣಿಸುತ್ತಿದ್ದ ಕಾರ್ ಗೆ ಕಂಟೇನರ್ ಡಿಕ್ಕಿಯಾಗಿದ್ದು, ಚನ್ನವೀರ ಶಿವಾಚಾರ್ಯರು ಪ್ರಾಣಾಯಪಾಯದಿಂದ‌ ಪಾರಾಗಿದ್ದಾರೆ.

ಬೀದರ್: ಜಿಲ್ಲೆಯ ಹಾರಕೂಡ‌ ಮಠದ ಚನ್ನವೀರ ಶಿವಾಚಾರ್ಯರು ಪ್ರಯಾಣಿಸುತ್ತಿದ್ದ ಕಾರ್ ಗೆ ಕಂಟೇನರ್ ಡಿಕ್ಕಿಯಾಗಿರುವ ಘಟನೆ ಬಸವಕಲ್ಯಾಣದ ತಡೋಳಾ ಬಳಿ‌ ನಡೆದಿದೆ.

ಚನ್ನವೀರ ಶಿವಾಚಾರ್ಯರು ಪ್ರಾಣಾಯಪಾಯದಿಂದ‌ ಪಾರಾಗಿದ್ದಾರೆ. ಅವರು ಹಾರಕೂಡದಿಂದ ಚಿಟಗುಪ್ಪಗೆ ಪ್ರಯಾಣಿಸುವಾಗ ಈ ಘಟನೆ ಸಂಭವಿಸಿದೆ.

S (1)

ಹಿಂಬದಿಯಿಂದ‌ ವೇಗವಾಗಿ ಬಂದ ಕಂಟೇನರ್ ಕಾರಿಗೆ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಶ್ರೀಗಳು ಸೇರಿ ಕಾರಿನಲ್ಲಿ ನಾಲ್ಕು ಜನರಿದ್ದರು. ಯಾರಿಗೂ ಅಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad