ಬೆಂಗಳೂರು : ಪ್ರೀತಿಸಲು ನಿರಾಕರಿಸಿದಕ್ಕೆ ನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಜಿಲ್ಲೆಯ ಆನೆಕಲ್ ತಾಲೂಕಿನ ಹುಲಿಮಂಗಲ ಸಮೀಪದ ನಂಜಾಪುರದಲ್ಲಿ ನಡೆದಿದೆ. ಹರ್ಷಿತ್ ಮೃತ ದುರ್ಧೈವಿ.
ಹರ್ಷಿತ್ ತುಮಕೂರು ಮೂಲದ ಮೃದುಲಾನ್ನು ಪ್ರೀತಿಸುತ್ತಿದ್ದ ಆಕೆಯು ಪ್ರೀತಿಸುತ್ತಿದ್ದಳು. ಇಬ್ಬರ ಪ್ರೀತಿಗೆ ಒಂದು ವರ್ಷ ಕಳೆದಿದೆ. ಮೃದುಲಾ ಮಾವನ ಮನೆಯಲ್ಲಿ ವಾಸಿಸುತ್ತಿದ್ದು ಅವರಿಗೆ ಇವರ ಪ್ರೀತಿ ವಿಷಯ ತಿಳಿದಿದೆ. ನಂತರ ಹರ್ಷಿತ್ಗೂ ಅವಳಿಂದ ದೂರ ಇರುವಂತೆ ಮನೆಯವರು ಬೆದರಿಕೆ ಹಾಕಿದ್ದಾರೆ. ಅಲ್ಲದೇ ಅವನಿಗೆ ಅಪರಿಚಿತ ನಂಬರ್ನಿಂದ ಕರೆ ಮಾಡಿ ಅವಳು ನಾನು ಮದುವೆ ಆಗುವವಳು ಅವಳಿಂದ ದೂರ ಇರುವಂತೆ ಬೆದರಿಕೆ ಹಾಕಿದ್ದಾನೆ. ಈ ವೇಳೆ ಮೃದುಲಾ ಕೂಡ ಪ್ರಿಯಕರನನ್ನು ನಿರಾಕರಿಸಿದ್ದಾಳೆ. ಇದರಿಂದ ನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬಂಧ ಪೊಲೀಸರು ಯುವತಿ ಮತ್ತು ಅತ್ತೆ ಕವಿತಾ,ಮಾವ ಹಾಗೂ ಅಪರಿತ ಕರೆ ಮಾಡಿದವನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ಕಳುಹಿಸಿದ್ದಾರೆ.