ಬೆಂಗಳೂರು: ಮಾನವ ಮೂಕ ಪ್ರಾಣಿಗಳನ್ನು ಬೇಟೆಯಾಡಿ ಹಲವು ಬಾರಿ ಕ್ರೂರನಂತೆ ವರ್ತಿಸಿದ್ದಾನೆ ಇನ್ನು ಆ ಕ್ರೂರತೆಯನ್ನು ಬಿಡದ ಆತ ಕದ್ದು ಮುಚ್ಚಿ ಕಾಡುಪ್ರಾಣಿಗಳನ್ನು ಕೊಂದು ತಿನ್ನುತಿದ್ದಾನೆ. ಇದೀಗ ಅದೇ ರೀತಿ ದೊಡ್ಡ ನಗರದಲ್ಲೇ ಜಿಂಕೆಯ ಬೇಟೆ ಮಾಡಿ ಮಾಂಸ ಸಮೇತ ಹಂತಕರು ಅರಣ್ಯಾಧಿಕಾರಿಗಳ ವಶಕ್ಕೆ ಸಸಿಕ್ಕಿಬಿದ್ದಿದ್ದಾರೆ.
ಆನೇಕಲ್ ವಲಯ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಖದೀಮರು ಸಿಕ್ಕಿಬಿದ್ದಿದ್ದಾರೆ. ಪ್ರವಾಸಿ ತಾಣ ಮುತ್ಯಾಲಮಡು ಬಳಿ ಜಿಂಕೆ ಬೇಟೆ ಆಡಿದ ಮೂವರನ್ನ ಅರೆಸ್ಟ್ ಮಾಡಿದ್ದಾರೆ. ಬೆಳಗಿನ ಜಾವ ಜಿಂಕೆ ಬೇಟೆ ಆಡಿದ್ದ ಆರು ಜನರ ತಂಡ, ಖಾಸಗಿ ಜಮೀನಿನಲ್ಲಿ ಮಾಂಸ ಹಂಚಿಕೊಂಡಿದ್ರು. ಮಾಂಸ ಹಂಚಿಕೊಂಡು ಬೈಕಿನಲ್ಲಿ ಹೊರಟಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಬೇಟೆ ಆಡಿದ ಸ್ಥಳಕ್ಕೆ ಕರೆದೊಯ್ದಿದ್ದು ಅಲ್ಲಿ ಪರಿಶೀಲನೆ ನಡೆಸಿದ್ರು. ಈ ವೇಳೆ ಬೇಟೆ ಆಡಿದ ಸ್ಥಳದಲ್ಲಿ ಪೋರ್ಡ್ ಕಾರು ಹಾಗೂ ಮೂವರು ಬೇಟೆಗಾರರು ಅಲ್ಲೇ ಇದ್ರು. ಅಧಿಕಾರಿಗಳನ್ನ ನೋಡುತ್ತಿದ್ದಂತೆ ಕಾರು ಬಿಟ್ಟು ಮೂವರು ಪರಾರಿಯಾಗಿದ್ದು, ಸದ್ಯ ಬೈಕಿನಲ್ಲಿ ಸಿಕ್ಕಿಹಾಕಿಕೊಂಡ ಮೂವರನ್ನ ಅರೆಸ್ಟ್ ಮಾಡಲಾಗಿದೆ.
ಈ ಕೇಸ್ ಸಂಬಂಧ ಹಾರೋಹಳ್ಳಿ ತಾಲೂಕಿನ ಮರಳವಾಡಿ ಗ್ರಾಮದ ದೇವರಾಜು, ಆನೇಕಲ್ ತಾಲೂಕಿನ ಆರು ಮೂಲದ ದೂರಾಮಕೃಷ್ಣ, ಆನೇಕಲ್ ತಾಲೂಕಿನ ಇಂಡ್ಲವಾಡಿ ಮೂಲದ ಕಿಶೋರ್ ವಿರುದ್ಧ ದೂರು ದಾಖಲಾಗಿದೆ.1 ಒಂದು ಕಾರು 3 ಬೈಕ್, ಗನ್, ಮಚ್ಚು ಹಾಗೂ ಜಿಂಕೆ ಮಾಂಸವನ್ನೂ ವಶಕ್ಕೆ ಪಡೆಯಲಾಗಿದೆ. ಸದ್ಯ ಪರಾರಿಯಾದವರಿಗಾಗಿ ಅಧಿಕಾರಿಗಳು ಪರಿಶೀಲನೆ ಮುಂದುವರೆದಿದೆ.