News Karnataka Kannada
Friday, May 03 2024
ಬೆಂಗಳೂರು

ಸಿಲಿಕಾನ್‌ ಸಿಟಿಯಲ್ಲಿ ಕಾಡು ಜಿಂಕೆ ಬೇಟೆ : ಮಾಂಸ ಸಮೇತ ಹಂತಕರು ಖಾಕಿ ವಶ

ಮಾನವ ಮೂಕ ಪ್ರಾಣಿಗಳನ್ನು ಬೇಟೆಯಾಡಿ ಹಲವು ಬಾರಿ ಕ್ರೂರನಂತೆ ವರ್ತಿಸಿದ್ದಾನೆ ಇನ್ನು ಆ ಕ್ರೂರತೆಯನ್ನು ಕದ್ದು ಮುಚ್ಚಿ ಕಾಡುಪ್ರಾಣಿಗಳನ್ನು ಕೊಂದು ತಿನ್ನುತಿದ್ದಾನೆ. ಇದೀಗ ಅದೇ ರೀತಿ ದೊಡ್ಡ ನಗರದಲ್ಲೇ ಜಿಂಕೆಯ ಬೇಟೆ ಮಾಡಿ ಮಾಂಸ ಸಮೇತ ಹಂತಕರು ಅರಣ್ಯಾಧಿಕಾರಿಗಳ ವಶಕ್ಕೆ ಸಸಿಕ್ಕಿಬಿದ್ದಿದ್ದಾರೆ.
Photo Credit : NewsKarnataka

ಬೆಂಗಳೂರು: ಮಾನವ ಮೂಕ ಪ್ರಾಣಿಗಳನ್ನು ಬೇಟೆಯಾಡಿ ಹಲವು ಬಾರಿ ಕ್ರೂರನಂತೆ ವರ್ತಿಸಿದ್ದಾನೆ ಇನ್ನು ಆ ಕ್ರೂರತೆಯನ್ನು  ಬಿಡದ ಆತ ಕದ್ದು ಮುಚ್ಚಿ ಕಾಡುಪ್ರಾಣಿಗಳನ್ನು ಕೊಂದು ತಿನ್ನುತಿದ್ದಾನೆ. ಇದೀಗ ಅದೇ ರೀತಿ ದೊಡ್ಡ ನಗರದಲ್ಲೇ ಜಿಂಕೆಯ ಬೇಟೆ ಮಾಡಿ ಮಾಂಸ ಸಮೇತ ಹಂತಕರು ಅರಣ್ಯಾಧಿಕಾರಿಗಳ ವಶಕ್ಕೆ ಸಸಿಕ್ಕಿಬಿದ್ದಿದ್ದಾರೆ.

ಆನೇಕಲ್ ವಲಯ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಖದೀಮರು ಸಿಕ್ಕಿಬಿದ್ದಿದ್ದಾರೆ. ಪ್ರವಾಸಿ ತಾಣ ಮುತ್ಯಾಲಮಡು ಬಳಿ ಜಿಂಕೆ ಬೇಟೆ ಆಡಿದ ಮೂವರನ್ನ ಅರೆಸ್ಟ್​​ ಮಾಡಿದ್ದಾರೆ. ಬೆಳಗಿನ ಜಾವ ಜಿಂಕೆ ಬೇಟೆ ಆಡಿದ್ದ ಆರು ಜನರ ತಂಡ, ಖಾಸಗಿ ಜಮೀನಿನಲ್ಲಿ ಮಾಂಸ ಹಂಚಿಕೊಂಡಿದ್ರು. ಮಾಂಸ ಹಂಚಿಕೊಂಡು ಬೈಕಿನಲ್ಲಿ ಹೊರಟಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಬೇಟೆ ಆಡಿದ ಸ್ಥಳಕ್ಕೆ ಕರೆದೊಯ್ದಿದ್ದು ಅಲ್ಲಿ ಪರಿಶೀಲನೆ ನಡೆಸಿದ್ರು. ಈ ವೇಳೆ ಬೇಟೆ ಆಡಿದ ಸ್ಥಳದಲ್ಲಿ ಪೋರ್ಡ್ ಕಾರು ಹಾಗೂ ಮೂವರು ಬೇಟೆಗಾರರು ಅಲ್ಲೇ ಇದ್ರು. ಅಧಿಕಾರಿಗಳನ್ನ ನೋಡುತ್ತಿದ್ದಂತೆ ಕಾರು ಬಿಟ್ಟು ಮೂವರು ಪರಾರಿಯಾಗಿದ್ದು, ಸದ್ಯ ಬೈಕಿನಲ್ಲಿ ಸಿಕ್ಕಿಹಾಕಿಕೊಂಡ ಮೂವರನ್ನ ಅರೆಸ್ಟ್​ ಮಾಡಲಾಗಿದೆ.

ಈ ಕೇಸ್​ ಸಂಬಂಧ ಹಾರೋಹಳ್ಳಿ ತಾಲೂಕಿನ ಮರಳವಾಡಿ ಗ್ರಾಮದ ದೇವರಾಜು, ಆನೇಕಲ್ ತಾಲೂಕಿನ ಆರು‌ ಮೂಲದ ದೂರಾಮಕೃಷ್ಣ, ಆನೇಕಲ್ ತಾಲೂಕಿನ ಇಂಡ್ಲವಾಡಿ ಮೂಲದ ಕಿಶೋರ್ ವಿರುದ್ಧ ದೂರು ದಾಖಲಾಗಿದೆ.1 ಒಂದು ಕಾರು 3 ಬೈಕ್, ಗನ್, ಮಚ್ಚು ಹಾಗೂ‌ ಜಿಂಕೆ ಮಾಂಸವನ್ನೂ ವಶಕ್ಕೆ ಪಡೆಯಲಾಗಿದೆ. ಸದ್ಯ ಪರಾರಿಯಾದವರಿಗಾಗಿ ಅಧಿಕಾರಿಗಳು ಪರಿಶೀಲನೆ ಮುಂದುವರೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು