ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 17 ಪಂದ್ಯದಲ್ಲಿ 3 ಬಾರಿ ರನ್ನರಪ್ ಪಡೆದಿತ್ತು ನಂತರದ ಪಂದ್ಯದಲ್ಲಿ ಸಾಲಾಗಿ ಸೋಲನುಭವಿಸಿ ಕಳಪೆ ಪ್ರದರ್ಶನ ನೀಡಿತ್ತು. ಇದರಿಂದ ನಿರೀಕ್ಷೇ ಇಟ್ಟಿದ್ದ ಅಭಿಮಾನಿಗಳಿಗೂ ನಿರಾಸೆಯುಂಟಾಗಿದೆ. ಈ ಸಂಬಂಧ ಮಾತನಾಡಿದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆರ್ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ರ್ಸಿಬಿ ತಂಡದಲ್ಲಿ 12-15 ಭಾರತೀಯ ಆಟಗಾರರು ಇದ್ದಾರೆ. ಜತೆಗೆ 10 ವಿದೇಶಿ ಪ್ಲೇಯರ್ಸ್ ಇದ್ದು, ಕಂಪ್ಲೀಟ್ ಕೋಚಿಂಗ್ ಸ್ಟಾಫ್ ಫಾರೀನರ್ಸ್ ಆಗಿದ್ದು ಸಮಸ್ಯೆ ಮೂಲವಾಗಿದೆ ಎಂದರು.
ಇನ್ನು, ಇಡೀ ತಂಡದಲ್ಲಿ ಕೆಲವರು ಮಾತ್ರ ಇಂಟರ್ ನ್ಯಾಷನಲ್ ಕ್ರಿಕೆಟಿಗರು. ಉಳಿದ ಎಲ್ಲರೂ ದೇಶಿಯ ಕ್ರಿಕೆಟಿಗರು. ಅರ್ಧಕ್ಕೆ ಅರ್ಧದಷ್ಟು ಜನರಿಗೆ ಇಂಗ್ಲೀಷ್ ಅರ್ಥ ಆಗೋದಿಲ್ಲ. ದೇಶಿಯ ಕ್ರಿಕೆಟಿಗರು ಹೇಗೆ ವಿದೇಶಿ ಆಟಗಾರರೊಂದಿಗೆ ಸಮಯ ಕಳೆಯಲು ಸಾಧ್ಯ? ಸ್ಟಾಫ್ನಲ್ಲಾದ್ರೂ ಇಂಡಿಯನ್ ಕೋಚ್ ಇದ್ದಾರಾ? ಎಂದಿದ್ದಾರೆ. ಕನಿಷ್ಠ ಆಟಗಾರರು ನಂಬುವ ಯಾರಾದರೂ ಒಬ್ಬರು ಇರಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.