ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕರ್ನಾಟಕ ಬಂದ್ ನಡೆಸಿದ್ದ ವಾಟಾಳ್ ನಾಗರಾಜ್, ಇಂದು ಕೆಆರ್ಎಸ್ ಡ್ಯಾಂ ಮುತ್ತಿಗೆಗೆ ಮುಂದಾಗಿದ್ದಾರೆ.
ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಿಂದ ಬೃಹತ್ ರ್ಯಾಲಿ ಮೂಲಕ ಕೆಆರ್ಎಸ್ ಡ್ಯಾಂನತ್ತ ವಾಟಾಳ್ ಪಡೆ ಸಾವಿರಾರು ವಾಹನಗಳಲ್ಲಿ ತೆರಳಲಿದೆ. ಇದಲ್ಲದೇ, ಬೆಂಗಳೂರಿನ ರಾಜಾಜಿನಗರದಲ್ಲಿ ಕರ್ನಾಟಕ ರಾಷ್ಟ್ರ ಒಕ್ಕೂಟ, ಕರ್ನಾಟಕ ಸಂಘಟನೆಗಳ ಸಮಿತಿ, ಕರ್ನಾಟಕ ಸಂಘಟನೆಗಳ ಕನ್ನಡ ಒಕ್ಕೂಟದಿಂದ ಕಾವೇರಿ ನದಿ ತೀರದ ಎಲ್ಲಾ ಅಣೆಕಟ್ಟುಗಳಲ್ಲಿ ಮಳೆ ಬಂದು ನೀರು ತುಂಬಲಿ. ಹಾಗೂ ಕಾವೇರಿ ನದಿ ನೀರಿನ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲೆಂದು ಹೋಮ ನಡೆಸಲಿದ್ದಾರೆ.