ಕುಣಿಗಲ್: ತಾಲೂಕಿನ ಹುತ್ರಿದುರ್ಗ ಹೋಬಳಿ ಯಲಗಲವಾಡಿ ಸಮೀಪದ ಕೂರಲಶಾನಯ್ಯನ ಪಾಳ್ಯ ಗ್ರಾಮದಲ್ಲಿ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಸೋಮವಾರ ನಡೆದಿದೆ.
ಒರಿಸ್ಸಾ ರಾಜ್ಯ ಮೂಲದ ಸಖಿ (45) ಕೊಲೆಯಾದ ಮಹಿಳೆ. ಕೆಲಸಕ್ಕೆ ಸಖಿ ಸೇರಿದಂತೆ ನಾಲ್ಕು ಮಂದಿ ಕೆಲವು ದಿನಗಳ ಹಿಂದೆ ಕುಣಿಗಲ್ ತಾಲೂಕು ಕೂರಲಶಾನಯ್ಯನಪಾಳ್ಯ ಗ್ರಾಮಕ್ಕೆ ಬಂದು ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.