ತುಮಕೂರು: ತುಮಕೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ದೇವಸ್ಥಾನಗಳ ಅರ್ಚಕರುಗಳಿಗೆ ಅಸ್ಪೃಶ್ಯತೆ ನಿರ್ಮೂಲನಾ ಅರಿವು ಕಾರ್ಯಗಾರ ಏರ್ಪಡಿಸಲಾಗಿತ್ತು.
ಈ ಕಾರ್ಯಗಾರದಲ್ಲಿ ಡಿವೈಎಸ್ಪಿ ಎಚ್. ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ದಿನೇಶ್ ಬಿ.ಎಂ.,ಗ್ರಾಮಾಂತರ ವೃತ್ತದ ಸಿಪಿಐ ಕುಮಾರ್, ಕ್ಯಾತ್ಸಂದ್ರ ಸಿಪಿಐ ಚನ್ನೇಗೌಡ, ಪ್ರೊಭೆಷನರಿ ಡಿವೈಎಸ್ಪಿ ರೋಹಿಣಿ ಸಿ.ಕೆ., ತಿಲಕ್ಪಾರ್ಕ್ ವೃತ್ತದ ಸಿಪಿಐ ನವೀನ್, ಮಹಿಳಾ ಠಾಣೆ ಸಿಪಿಐ ಡಾ.ನವೀನ್ ಕುಮಾರ್, ಪಿಎಸ್ಐಗಳಾದ ದೇವಿಕಾ, ಭಾಗ್ಯಲಕ್ಷ್ಮಿ, ಸಂಗಪ್ಪ ಮೇಟಿ ಸಂಗಣ್ಣ ಆಚಾರ್ ಮತ್ತಿತರರು ಭಾಗವಹಿಸಿದ್ದರು.