News Karnataka Kannada
Sunday, April 28 2024
ತುಮಕೂರು

ತುಮಕೂರು: ಕೈ ತಪ್ಪಿದ ಬಿಜೆಪಿ ಟಿಕೆಟ್‌, ಬೆಟ್ಟಸ್ವಾಮಿ ಆಸ್ಪತ್ರೆಗೆ ದಾಖಲು

Tumkur: Bettaswamy admitted to hospital after missing BJP ticket
Photo Credit : News Kannada

ತುಮಕೂರು: ಬಿಜೆಪಿ ಎರಡನೇ ಪಟ್ಟಿಯಲ್ಲಿ ತಮಗೆ ಗುಬ್ಬಿ ಟಿಕೇಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಆಘಾತಕ್ಕೊಳಗಾದ ಹಿಂದುಳಿದ ವರ್ಗಗಳ ಮುಖಂಡ ಜಿ.ಎನ್.ಬೆಟ್ಟ ಸ್ವಾಮಿ ಬುಧವಾರ ಮಧ್ಯರಾತ್ರಿ ಹೃದಯಬೇನೆ ಕಾಣಿಸಿಕೊಂಡಿದ್ದು, ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ  ದಾಖಲಾಗಿದ್ದಾರೆ.

ಮಧ್ಯ ರಾತ್ರಿ ಎರಡರ ಸಮಯದಲ್ಲಿ ಕುಟುಂಬಸ್ಥರು ಬೆಟ್ಟಸ್ವಾಮಿ ಅವರನ್ನು ಆಸ್ಪತ್ರೆಗೆ ಕರೆತಂದಿದ್ದು ಹೃದಯಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಪರೀಕ್ಷೆ ಗೊಳಪಡಿಸಿ ಬೆಳಿಗ್ಗೆವರೆಗೆ ಚಿಕಿತ್ಸೆ ನೀಡಿದ್ದಾರೆ.

ಪಕ್ಷ ಟಿಕೆ ಟ್ ನೀಡಲಿಲ್ಲ ಎಂಬ ವಿಷಯದಲ್ಲಿ ಮಾನಸಿಕವಾಗಿ ಕುಗ್ಗಿದ್ದು, ಒತ್ತಡ ದಿಂದ ಹೃದಯಬೇನೆ ಉಂಟಾಗಿದ್ದು, ಹೃದಯಾಘಾತವಲ್ಲ ಎಂದು ತಿಳಿದ ಮೇಲೆ ಬೆಳಿಗ್ಗೆ ಯವರೆಗೆ ಆಸ್ಪತ್ರೆಯಲ್ಲಿ ಉಳಿದು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ ಎಂದು ಆಸ್ಪತ್ರೆಯವರು ನೀಡಿದ ಮಾಹಿತಿಯಿಂದ ಖಚಿತವಾಗಿದೆ.

ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಜಿ. ಎನ್. ಬೆಟ್ಟ ಸ್ವಾಮಿಅವರ ಪಕ್ಷ ಯಾರಿಗೆ ಟಿಕೇಟ್ ನೀಡಿದರು ಬಿಜೆಪಿ ಗೆಲ್ಲಿಸಲು ಶ್ರಮಿಸುವುದಾಗಿ ಬೆಟ್ಟ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬೆಟ್ಟ ಸ್ವಾಮಿ ಅವರ ಈ ಹೇಳಿಕೆ ಹಿಂ ದೆ ಪಕ್ಷದ ವರಿಷ್ಠ ರೊಬ್ಬರು ಕರೆ ಮಾಡಿ ನಿಮಗೆ ಟಿಕೇಟ್ ಕನ್ಫರ್ಮ್ ಆಗಿದೆ. ಆದರೆ ಘೋಷಣೆ ಗೂ ಮುನ್ನ ಟಿಕೇಟ್ ಪೈಪೋಟಿಯ ಪರಿಸ್ಥಿತಿ ತಿಳಿಗೊಳಿಸಲು ಈ ರೀತಿ ಹೇಳಿಕೆ ಕೊಡಿ ಎಂದು ನಿರ್ದೇಶಿಸಿದ್ದರು ಎಂದು ತಿಳಿದುಬಂದಿದೆ.

ವರಿಷ್ಠರ ನಿರ್ದೇಶನದಂತೆ ಬೆಟ್ಟಸ್ವಾಮಿ ಅವರು ಹೇಳಿಕೆ ಕೊಟ್ಟಿದ್ದು ಹೇಳಿ ಕೆ ಕೊಟ್ಟ ಬೆನ್ನಿಗೆ ಟಿಕೇಟ್ ಕೈ ತಪ್ಪಿ ದಿಲೀಪ್ ಕುಮಾರ್ ಅವರಿಗೆ ದೊರೆತಿದ್ದು ಬೆಟ್ಟಸ್ವಾಮಿ ಅವರಿಗೆ ಆಘಾತ ಉಂಟು ಮಾಡಿದೆ ಎಂದು ಬಿಜೆಪಿ ವಲಯದಲ್ಲೇ ಚರ್ಚೆ ಯಾಗುತ್ತಿದೆ. ಈ ಮಧ್ಯೆ ಬೆಟ್ಟಸ್ವಾಮಿ ಅವರ ಹೇಳಿಕೆಯು ಒಳ ಒಪ್ಪಂದದ ಶಂಕೆಗೂ ಆಸ್ಪದ ಒದಗಿಸಿದ್ದು ಈ ಬೆಳವಣಿಗೆ ಗಳು ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರುತ್ತವೆ ಎಂದು ಕಾದು ನೋಡಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು