News Karnataka Kannada
Thursday, May 02 2024
ತುಮಕೂರು

ತುಮಕೂರು: ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಿದ್ಧಗಂಗಾ ಮಠಕ್ಕೆ ನೂತ‌ನ ಪಟ್ಟಾಧಿಕಾರ

Nootha's coronation with religious rituals
Photo Credit : News Kannada

ತುಮಕೂರು: ನಾಡಿನ ಹೆಸರಾಂತ ಸಿದ್ಧ ಗಂಗಾ ಮಠಕ್ಕೆ ಬಸವ ಜಯಂತಿಯ ಶುಭ ದಿನದಂದು ನೂತನ ಉತ್ತರಾಧಿಕಾರಿ ನಿಯುಕ್ತಿ ಗೊಳಿಸಿದ್ದು, ನೆಲಮಂಗಲ ತಾಲೂಕು ಮೈಲನಹಳ್ಳಿ ಮೂಲದ ವಟು ಮನೋಜ್ ಕುಮಾರ್ ಅವರಿಗೆ ಶ್ರೀಶಿವಸಿದ್ದೇಶ್ವರ ಸ್ವಾಮೀಜಿ ಯೆಂಬ ಹೊಸ ಅಬಿಧಾನದೊಂದಿಗೆ ನಿರಂಜನ ಪಟ್ಟಾಧಿಕಾರ ನೆರವೇರಿಸಲಾಯಿತು.

ಇವರೊಂದಿಗೆ ಕಂಚಗಲ್ ಬಂಡೆಮಠಕ್ಕೆ ಕಾಳೇನಹಳ್ಳಿ ಮೂಲದ ಹರ್ಷ ಅವರಿಗೆ ಮಹಾಲಿಂಗ ಸ್ವಾಮೀಜಿ ಎಂಬ ಅಭಿದಾನದೊಂದಿಗೆ ವಿರಕ್ತಾಶ್ರಮ ದೀಕ್ಷೆ ನೀಡಲಾಗಿದ್ದು ದೇವನಹಳ್ಳಿ ಮಠಕ್ಕೂ ಸದಾಶಿವ ಸ್ವಾಮೀಜಿ ಅವರನ್ನು ನೂತನ ಉತ್ತರಾಧಿಕಾರಿಯಾಗಿ ಶಾಸ್ತ್ರೋಕ್ತವಾಗಿ ಪಟ್ಟಕಟ್ಟಲಾಯಿತು.

ಕಾರ್ಯಕ್ರಮದ ನಿಮಿತ್ತ ಶನಿವಾರ ರಾತ್ರಿ ಯಿಂದಲೇ ಧಾರ್ಮಿಕ ಕಾರ್ಯ ಕ್ರಮಗಳು ನೆರವೇರುದ್ದು ಸಿದ್ಧಗಂಗಾ. ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಮಠದ ನೂತನ ಉತ್ತರಾಧಿಕಾರಿಗೆ ದೀಕ್ಷಾ ಸಂಸ್ಕಾರಇಷ್ಟಲಿಮಗ ಪೂಜೆ ಮಾಡಿಸಿದರು.

ಮೂವರು ವಟುಗಳ ನಿರಂಜನ ಪಟ್ಟಾಧಿಕಾರ ಸಮಾರಂಭಕ್ಕೆ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀ ಗಳು, ಹಿರೇಮಠ ಶ್ರೀ ಗಳುಸೇರಿ ಹರಗುರುಚರಮೂರ್ತಿಗಳು, ಸಂಸದ ಜಿ. ಎಸ್. ಬಸವರಾಜ್ ಸೇರಿ ಮಾಜಿ ಎಂಎಲ್ಸಿ ಡಾಹುಲಿನಾಯ್ಕರ್, ಮಾಜಿ ಸಚಿವ ಶಿವಣ್ಣ, ಕೆಆರ್ ಐಡಿಎಲ್ ಅಧ್ಯಕ್ಷ ರುದ್ರೇಶ್, ಡಾ. ಎಂ. ಎನ್ ಚನ್ನಬಸಪ್ಪ, ಟಿ. ಕೆ, ನಂಜುಂಡಪ್ಪ, ಎಸ್. ವಿಶ್ವನಾಥಯ್ಯ,ಡಾ.ಎಸ್.ಪರಮೇಶ್, ನಾಗರಾಜ್, ಡಾ. ಶಿವಕುಮಾರಯ್ಯ ಸೇರಿದಂತೆ ಮಠದ ಆಡಳಿತ ಮಂಡಳಿ ಯವರು ರಾಜ್ಯ ದ ಹಲವೆಡೆ ಯ ಭಕ್ತರು ಪಾಲ್ಗೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು