ತುಮಕೂರು, ನ.28: ಮಧುಗಿರಿ ಬೈಪಾಸ್ ರಸ್ತೆಯಲ್ಲಿ ಬೆಂಗಳೂರು ಮೂಲದ ಯುವಕನೋರ್ವನಿಗೆ 20,000 ರೂ. ಸುಪಾರಿ ನೀಡಿ ಪತಿಯನ್ನು ಕೊಲೆಗೈದ ಪತ್ನಿ, ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದು ಶವವನ್ನು ಹೂಳಿರುವ ಆಘಾತಕಾರಿ ಘಟನೆ ಜಿಲ್ಲೆಯ ಕೊರಟಗೆರೆಯಲ್ಲಿ ನಡೆದಿದೆ.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ರೈತ ಕೋಲಪ್ಪ ಅವರ ಜಮೀನಿನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ದೊಡ್ಡಬಳ್ಳಾಪುರ ತಾಲೂಕಿನ ದುರ್ಗದಹಳ್ಳಿ ನಿವಾಸಿ ಸುರೇಶ್ (36) ಎಂದು ಗುರುತಿಸಲಾಗಿದೆ.
ಸುರೇಶ್ ಅವರ ಪತ್ನಿ ವೆಂಕಟಲಕ್ಷ್ಮಮ್ಮ ಅವರು ಬಸವನಹಳ್ಳಿ ಗ್ರಾಮದ ಲೋಕೇಶ್ (27) ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಲು ಅಡ್ಡಿಪಡಿಸುತ್ತಿದ್ದ ತನ್ನ ಗಂಡನನ್ನು ಮುಗಿಸಲು, ಅವಳು ಯುವಕನಿಗೆ 20,000 ಸುಪಾರಿ ನೀಡಿ ಕೊಂದಳು.