ತುಮಕೂರು: ತುಮಕೂರು ಗ್ರಾಮಾಂತರದಲ್ಲಿ ಶಾಸಕ ಡಿ.ಸಿ ಗೌರಿಶಂಕರ್ ಅವರ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾದರು.
ಗ್ರಾಮಾಂತರದ ಬಳ್ಳಗೆರೆಯ ಶಾಸಕರ ನಿವಾಸದಲ್ಲಿ ಇಂದು ನೆಡೆದ ಜೆಡಿಎಸ್ ಪಕ್ಷದ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿಯ ನೂರಾರು ಕಾರ್ಯಕರ್ತರು ಪಕ್ಷ ತೋರೆದು ಜೆಡಿಎಸ್ ಸೇರಿಕೊಂಡರು. ಈ ಸಂದರ್ಭದಲ್ಲಿ ಗೂಳೂರು ಜಿಲ್ಲಾ ಪಂಚಾಯತ್ ಜೆಡಿಎಸ್ ಘಟಕದ ಅಧ್ಯಕ್ಷ ಪಾಲನೇತ್ರಯ್ಯ, ಬೆಳಗುಂಬ ವೆಂಕಟೇಶ್ ಮುಂತಾದವರು ಭಾಗವಹಿಸಿದ್ದರು.
ಕಾರ್ಯಕರ್ತರಲ್ಲಿ ನಾನು ಶಾಸಕ ಸ್ಥಾನದಿಂದ ಅನರ್ಹ ಆಗಿದ್ದೇನೆ ಎಂದು ತಪ್ಪು ತಿಳುವಳಿಕೆಯ ಗೊಂದಲಗಳು ಮೂಡಿವೆ. ನಾನು ಶಾಸಕ ಸ್ಥಾನದಿಂದ ಅನರ್ಹನಾಗಿಲ್ಲ. ಕೇವಲ ಅಸಿಂಧು ಆಗಿದ್ದೇನೆ.ನಾನು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದೇನೆ. ಜೊತೆಗೆ ನನ್ನ ಮೇಲೆ ಬಂದಿರುವ ಆರೋಪಗಳಿಂದ ಮುಕ್ತನಾಗಲು ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡುತ್ತಿದ್ಧೇನೆ. ಮುಂಬರುವ ಚುನಾವಣೆಯಲ್ಲಿ ನಾನೇ ತುಮಕೂರು ಗ್ರಾಮಾಂತರ ಅಭ್ಯರ್ಥಿ ಆಗಿ ಸ್ಪರ್ಧೆಯಲ್ಲಿ ಇರುತ್ತೇನೆ. ಕಾರ್ಯಕರ್ತರು ಆತಂಕ ಪಡಬಾರದು.
– ಡಿ.ಸಿ ಗೌರಿಶಂಕರ್, ಶಾಸಕ,ತುಮಕೂರು ಗ್ರಾಮಾಂತರ.