News Karnataka Kannada
Friday, May 10 2024
ತುಮಕೂರು

‘ಭೌಗೋಳಿಕ ಪ್ರದೇಶದ ಇತಿಹಾಸವು ಚಾರಿತ್ರಿಕ ಅಂಶಗಳಾಧಾರಿತವಾಗಿರುತ್ತದೆ: ಸದಾನಂದ ಅಭಿಪ್ರಾಯ

'The history of a geographical area is based on historical factors'
Photo Credit : News Kannada

ತುಮಕೂರು: ಯಾವುದೇ ಭೌಗೋಳಿಕ ಪ್ರದೇಶದ ಇತಿಹಾಸ ಅಲ್ಲಿನ ಚಾರಿತ್ರಿಕ ಅಂಶಗಳಾಧಾರಿತವಾಗಿರುತ್ತದೆ. ಚರಿತ್ರೆಯ ಅಸ್ಥಿತ್ವವನ್ನು ಉಳಿಸುವ ಕಾರ್ಯ ಪತ್ರಾಗಾರದ್ದಾಗಿರುತ್ತದೆೆ ಎಂದು ರಾಜ್ಯ ಪತ್ರಾಗಾರ ಇಲಾಖೆಯ ಉಪನಿರ್ದೇಶಕ ಡಾ.ನೆಲ್ಕುದ್ರಿ ಸದಾನಂದ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗವು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಾಗಾರ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿಖರ ದಾಖಲೆಗಳ ಆಧಾರವಿಲ್ಲದೆ ಸಮಾಜವೂ ಇತಿಹಾಸವನ್ನುಒಪ್ಪುವುದಿಲ್ಲ. ಎಲ್ಲದಕ್ಕೂ ದಾಖಲೆಗಳ ಅವಶ್ಯಕತೆಯಿದೆ. ಚಾರಿತ್ರಿಕ ಆಕಾರಗಳನ್ನು ದಾಖಲಿಸಲು ಪತ್ರಾಗಾರ ಇಲಾಖೆಯು ಹಲವು ವರ್ಷಗಳಿಂದ ಶ್ರಮಿಸುತ್ತಿದೆ. ದಾಖಲೆಗಳ ಸಂರಕ್ಷಣೆಯಲ್ಲಿ ಪತ್ರಾಗಾರ ಇಲಾಖೆಯು ಆಧುನಿಕ, ವೈಜ್ಞಾನಿಕ ಸಂರಕ್ಷಣಾ ವಿಧಾನಗಳನ್ನು ಅಳವಡಿಸಿಕೊಂಡಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಸರ್ಕಾರಗಳ ರಚನೆಯ ನಂತರ ಆಡಳಿತ ಪಕ್ಷಗಳು ಇತಿಹಾಸದ ವೈಭವವನ್ನು, ಚಾರಿತ್ರಿಕ ಸತ್ಯಗಳನ್ನು ಉಳಿಸಿ, ಪೀಳಿಗೆಗಳಿಗೆ ವಿಷಯ ಪಸರಿಸಲು ಪತ್ರಾಗಾರ ಇಲಾಖೆಯನ್ನು ಸ್ಥಾಪಿಸಿದವು. ದಾಖಲೆಗಳು ವ್ಯಕ್ತಿ, ಸಂಸ್ಥೆ ಹಾಗೂ ಸರ್ಕಾರಗಳ ಅಥವಾ ಆಡಳಿತ ವ್ಯವಸ್ಥೆಯ ವ್ಯವಹಾರಗಳು ಲಿಖಿತ ಮತ್ತುಕಾಗದ ಪತ್ರಗಳ ರೂಪದಲ್ಲಿರುತ್ತವೆ ಎಂದರು.

ಸಾಂಸ್ಕೃತಿಕ, ಐತಿಹಾಸಿಕ, ಪಾರಂಪರಿಕ ಸತ್ಯಗಳು, ಅವುಗಳ ಮೌಲ್ಯಾಧಾರಗಳ ಮೇಲೆ ಪತ್ರಾಗಾರದಲ್ಲಿ ದಾಖಲೆಗಳ ಸಂಗ್ರವಿರುತ್ತದೆ ಎಂದು ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಸಂಯೋಜಕಿಡಾ. ಪ್ರಿಯಾಠಾಕೂರ್, ಪ್ರಾಧ್ಯಾಪಕ ಪ್ರೊ.ಎಂ.ಕೊಟ್ರೇಶ್, ವಿವಿ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮೊನ್ಬಿಂದರ್‌ಕೌರ್ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು