News Karnataka Kannada
Saturday, May 04 2024
ತುಮಕೂರು

ಇತಿಹಾಸ ತಿರುಚಿ ಸಮಾಜದಲ್ಲಿ ಗೊಂದಲ ಸೃಷ್ಟಿಸಿದ್ದೇ ಶಿಕ್ಷಣ ಸಚಿವರ ಸಾಧನೆ- ಸಿದ್ದರಾಮಯ್ಯ

Education Minister's achievement was to distort history and hit the society: Siddaramaiah
Photo Credit : News Kannada

ತುಮಕೂರು: ಡಾ: ಬಿ.ಅರ್ ಆಂಬೇಡ್ಕರ್  ಅವರು ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲಾ ಎಂದಿದ್ದರು, ಇಂತಹ ಮಹಾನ್ ವ್ಯಕ್ತಿಗಳಾದ ಬಸವೇಶ್ವರರ, ಕುವೆಂಪು, ನಾರಾಯಣ ಗುರು, ಕೆಂಪೇಗೌಡರ, ಸಂತ ಶಿಶುನಾಳ ಶರೀಫರ ಇತಿಹಾಸವನ್ನು ತಿರುಚಿ ಶಿಕ್ಷಣ ವ್ಯವಸ್ಥೆಯನ್ನು ಹಾಳುಮಾಡಿದ ನೀಚ ಶಿಕ್ಷಣ ಸಚಿವ ನಾಗೇಶ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ತಿಪಟೂರು ನಗರದ ಕಲ್ಪತರು ಕ್ರಿಡಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಕೆ. ಷಡಕ್ಷರಿ ಪರವಾಗಿ ಮತಯಾಚನೆ ಕಾರ್ಯಕ್ರಮದಲ್ಲಿ, ಮಾತನಾಡಿದ ಅವರು ಸಚಿವ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ, ಎಂದರೆ ಸರ್ವಜನಾಂಗದವರಿಗೂ ಇವರು ಆಗಿರುತ್ತಾರೆ. ಆದರೆ ಇವರು ಕೇವಲ ಆರ್,ಎಸ್, ಎಸ್ ನ ಸೇವಕರೆ ಹೊರತು ಸಾಮಾನ್ಯ ಜನರ ಸೇವಕರಲ್ಲಾ, ಇವರ ಅಧಿಕಾರ ಅವಧಿಯಲ್ಲಿ ಅಭಿವೃದ್ಧಿ ಮರೆತು ಕೇವಲ ಸಾಮಾಜವನ್ನು ಹೊಡೆಯುವ ಕೆಲಸ ಮಾಡಿದ್ದಾರೆ ಎಂದರು.

ಪೊಲೀಸರು ಇವರ ಕೈಗೊಂಬೆಯಂತೆ ಕೆಲಸ ಮಾಡಿದ್ದಕ್ಕೆ ಇವರಿಗೆ ಸರಿಯಾದ ಬಹುಮಾನ ಸಿಕ್ಕಿದೆ, ಒಂದು ವರ್ಗಾವಣೆಗೆ ೬೦ ರಿಂದ ೭೦ ಲಕ್ಷ ಲಂಚ ಪಡೆದಿದ್ದಾರೆ, ನಂದೀಶ್ ಎಂಬುವ ಸಬ್‌ಇನ್ಸ್‌ಪೆಕ್ಟರ್ ಅತ್ಮಹತ್ಯೆ ಮಾಡಿಕೊಂಡಾಗ ಇವರ ಸಚಿವ ಎಂ.ಟಿ.ಬಿ ನಾಗರಾಜ್ ಹೇಳುತ್ತಾನೆ ಇಷ್ಟೊಂದು  ಲಂಚಕೊಟ್ಟು ಬಂದ ಆತ ಸಾಲ ತೀರಿಸಲು ಆಗದೆ ಸತ್ತು ಹೋಗಿದ್ದಾನೆ ಎಂದು ಹೇಳಿದ್ದನು ಎಲ್ಲರೂ ನೋಡಿದ್ದಾರೆ,  ಪೊಲೀಸರು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದಾರೆ, ಮುಂದೆ ನಿಮ್ಮ ಭವಿಷ್ಯ ಹಾಳುಗೆಡುವುತ್ತಾರೆ ಎಂದು ಕಿವಿಮಾತು ಹೇಳಿ ಬಿಜೆಪಿ ವಿರುದ್ಧ ಕಿಡಿಕಾರಿದರು.

ಕೊಬ್ಬರಿ ಮತ್ತು ರಾಗಿ ಬೆಳೆಗಾರರಿಗೆ ನನ್ನ ಅವಧಿಯಲ್ಲಿ ಬೆಂಬಲ ಬೆಲೆ ನೀಡಿದ್ದೆನು., ಷಡಕ್ಷರಿ ಶಾಸಕನಾಗಿದ್ದಾಗ ಒಂದೆ ಒಂದು ದಿನ ವ್ಯಯಕ್ತಿಕವಾಗಿ ಏನು ಕೇಳಲಿಲ್ಲಾ, ಕ್ಷೇತ್ರದ ಅಭಿವೃದ್ಧಿಗೆ ಸಾವಿರ ಕೋಟಿ ಪಡೆದು ಉತ್ತಮ ಕಾರ್ಯ ಮಾಡಿದ್ದರು, ಇಂತಹವರನ್ನು ನೀವು ಶಾಸಕರನ್ನಾಗಿ ಆಯ್ಕೆಮಾಡುವುದು ನಿಮ್ಮೆಲ್ಲರ ಜವಬ್ದಾರಿ, ಇವರನ್ನು ಗೆಲ್ಲಿಸುವುದರಿಂದ ನನ್ನ ಶಕ್ತಿ ಹೆಚ್ಚುತ್ತದೆ, ಈ ಬಾರಿ ಕೆ.ಷಡಕ್ಷರಿಗೆ ಹೆಚ್ಚು ಮತಗಳನ್ನು ನೀಡಿ ಆಶೀರ್ವದಿಸಿ ಎಂದು ಸೇರಿದ್ದ ಸಾವಿರಾರು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಕೆ.ಷಡಕ್ಷರಿ ಮಾತನಾಡಿ ಇಂದು ಸೇರಿರುವ ಸೇರಿರುವ ಸಾವಿರಾರು ಕಾರ್ಯಕರ್ತರನ್ನು ನನ್ನ ಸಹೋದರ ಸಹೋದರಿಯರು ಎಂದು ತಿಳಿದಿದ್ದೇನೆ, ತಾಲೂಕಿಗೆ ನನ್ನ ಅವಧಿಯಲ್ಲಿ ಎಸ್.ಟಿ.ಪಿ ಘಟಕ, ೨೪*೭ ಕುಡಿಯುವ ನೀರಿನ ಯೋಜನೆ, ಇದಕ್ಕೆ ೧೨೦ ಕೋಟಿ ಹಣ, ನಗರಸಭಾ ಕಟ್ಟಡ, ಮಿನಿ ವಿಧಾನ ಸೌಧ, ಪ್ರವಾಸಿ ಮಂದಿರ, ಹಾಸ್ಟೆ‌ಲ್‌ಗ ಳ ನಿರ್ಮಾಣ, ನರಸಿಂಹರಾಜು ಭವನಕ್ಕೆ ೨ ಕೋಟಿ ಹಣ, ಗ್ರಾಮೀಣ ರಸ್ತೆಗಳು, ನಗರದ ರಸ್ತೆಗಳು, ಇನ್ನು ಹತ್ತು ಹಲವು ಕೆಲಸಗಳನ್ನು ಮಾಡಿದ್ದೇನೆ, ಇನ್ನೊಂದು ಅವಕಾಶ ನೀಡಿದರೆ ನನ್ನ ಜೀವ ಇರುವವರೆಗೂ ನಿಮ್ಮಲ್ಲರ ಸೇವೆಗೆ ಮುಡಿಪಾಗಿಟ್ಟು ತಾಲೂಕಿನ ಅಭಿವೃದ್ಧಿಯ ಜೋತೆಗೆ ತಾಲೂಕನ್ನು ಜಿಲ್ಲಾ ಕೇಂದ್ರ ಮಾಡುತ್ತೇನೆ ಎಂದು ಮತದಾರರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ಲೋಕೇಶ್ವರ ಮಾತನಾಡಿ ತಾಲೂಕಿನ ಸಚಿವ ಬಡವರು ದಿನ ದಲಿತರು ಕೊವಿಡ್ ಸಂದರ್ಭದಲ್ಲಿ ತಿನ್ನಲು ಅನ್ನ ಕೇಳಿದರೆ ೨೦% ಕಮಿಷನ್ ಕೇಳಿ ತಾಲೂಕಿನ ಮರ್ಯಾದೆಯನ್ನೆ ದೇಶದ ಮಟ್ಟದಲ್ಲಿ ಹಾಳು ಮಾಡಿದರು. ಇಂತಹ ಒಂದು ಗ್ರಹಣ ಬಿಡಿಸುವುದೆ ನಮ್ಮೆಲ್ಲರ ಕೆಲಸ ಎಂದರು, ತಾಲೂಕನ್ನು ಜಿಲ್ಲಾ ಕೇಂದ್ರ ಮಾಡಬೇಕು ಹಾಗೂ ಕುರುಬ ಸಮಾಜದ ಭವನ ನಿರ್ಮಾಣ ಮಾಡಿಕೊಡಬೇಕೆಂದು ಸಿದ್ದರಾಮಯ್ಯನವರಿಗೆ ಇದೇ ಸಂದರ್ಭದಲ್ಲಿ ಬೇಡಿಕೆ ಇಟ್ಟರು.

ಇದೇ ಸಂದರ್ಭದಲ್ಲಿ ಮಾಜಿ ಸಚಿವರಾದ ಎಚ್,ಎಂ ರೇವಣ್ಣ, ಉಮಾಶ್ರೀ, ನಿಕಿತ್ ರಾಜ್ ಮೌರ್ಯ, ತಾಲೂಕಿನ ಕಾಂಗ್ರೆಸ್ ಮುಖಂಡರು ಮತ್ತಿತರರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು