ತುಮಕೂರು : ಪತ್ನಿಯನ್ನು ಲಾಡ್ಜ್ಗೆ ಕರೆದೊಯ್ದು ಆಕೆಯ ಕಾಲನ್ನು ಕತ್ತರಿಸಿ ಬಳಿಕ ತಾನೂ ಹೊಟ್ಟೆಗೆ ಚೂರಿ ಹಾಕಿಕೊಂಡು ಪತಿ ಹೈಡ್ರಾಮಾವನ್ನೇ ಮಾಡಿದ ಘಟನೆಯು ತುಮಕೂರಿನ ಅಶೋಕ ಲಾಡ್ಜ್ & ಹೋಟೆಲ್ನಲ್ಲಿ ಸಂಭವಿಸಿದೆ.
ಈ ಕೃತ್ಯವನ್ನು ಎಸಗಿದ ಗದಗ ಮೂಲದ ಬಾಬು (34) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಧುಗಿರಿ ಮೂಲದ ಅನಿತಾ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ಕು ವರ್ಷದ ಹಿಂದೆ ಅನಿತಾಳನ್ನು ವರಿಸಿದ್ದ ಬಾಬು ಆಕೆಯನ್ನು ಕೊಲೆ ಮಾಡಬೇಕೆಂದು ಸಂಚು ರೂಪಿಸಿದ್ದ. ಹೀಗಾಗಿ ಆಕೆಯನ್ನು ಲಾಡ್ಜ್ಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ.
ಬ್ಯಾಗಿನಲ್ಲಿ ಮಚ್ಚನ್ನು ತೆಗೆದುಕೊಂಡು ಬಂದಿದ್ದ ಆರೋಪಿಯು ಪತ್ನಿಯ ಕಾಲನ್ನು ಕತ್ತರಿಸಿ ಬಳಿಕ ಹೋಟೆಲ್ ಮಾಲೀಕರನ್ನು ಸಂಪರ್ಕಿಸಿದ್ದಾನೆ. ಪತ್ನಿ ಗಾಯಗೊಂಡಿದ್ದಾಳೆ ನಾಲ್ವರು ಹುಡುಗರನ್ನು ಕಳುಹಿಸುವಂತೆ ಕೇಳಿದ್ದ ಎನ್ನಲಾಗಿದೆ.
ಈ ಬಗ್ಗೆ ಹೋಟೆಲ್ ಮಾಲೀಕ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಅನಿತಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಪತಿ ಬಾಬುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.