ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಚರ್ಚೆ ಒಂದೂವರೆ ದಶಕದ ಬಳಿಕ ಮುನ್ನೆಲೆಗೆ ಬಂದಿದೆ. ಈ ನಡುವೆ ಇವತ್ತು ಮಹತ್ವದ ಸಮಾವೇಶ ಆಯೋಜನೆ ಆಗಿದೆ. ಮೈತ್ರಿ ಸಾಧಕ-ಬಾಧಕಗಳ ಕುರಿತು ಚರ್ಚೆ ಆಗಲಿದ್ದು, ಜೆಡಿಎಸ್ ಸಮಾವೇಶದ ಪಕ್ಷದ ಅಜೆಂಡಾ ಪ್ರಕಟವಾಗಲಿದೆ.
ಬಿಜೆಪಿ ಜತೆಗಿನ ಮೈತ್ರಿ ಕುರಿತು ಜೆಡಿಎಸ್ ಪ್ರಮುಖರು ಇಂದಿನ ಸಭೆಯಲ್ಲಿ ಸ್ಪಷ್ಟತೆ ನೀಡುವ ಸಾಧ್ಯತೆ ಇದೆ. ಮೈತ್ರಿಯ ಅನಿವಾರ್ಯ, ಭವಿಷ್ಯದಲ್ಲಿ ಬಿಜೆಪಿ ಜತೆಗಿನ ಸಂಬಂಧ ಕುರಿತು ಈ ಸಭೆಯನ್ನ ಬಳಸಿಕೊಳ್ಳಲಿದ್ದಾರೆ.
ಇನ್ನು, ಕಳೆದದಿನ ಈ ಕುರಿತು ಮಾತನಾಡಿದ ಮಾಜಿ ಸಿಎಂ ಹೆಚ್ಡಿಕೆ, ಸಮಾವೇಶದಲ್ಲಿ ಕಾರ್ಯಕರ್ತರ ಅಭಿಪ್ರಾಯ ತೆಗೆದುಕೊಳ್ಳಬೇಕಿದೆ. ಕಾಂಗ್ರೆಸ್ಗೆ ಉತ್ತರ ನೀಡುವ ಕಾಲ ಹತ್ತಿರ ಇದೆ. ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು, ದೆಹಲಿಗೆ ಹೋಗುವ ಬಗ್ಗೆ ತೀರ್ಮಾನ ಮಾಡಿಲ್ಲ. ಆದ್ರೆ, ರಾಜ್ಯದ ಹಿತದೃಷ್ಟಿಯಿಂದ ಮೈತ್ರಿ ಅನಿವಾರ್ಯ ಅನ್ನೋ ಸ್ಥಿತಿಗೆ ಹೆಚ್ಡಿಕೆ ಬಂದಿದ್ದಾರೆ. ಆದ್ರೆ, ಈ ಕುರಿತು ಕಾರ್ಯಕರ್ತರ ಅಭಿಪ್ರಾಯ ಪಡೆದು ಮೈತ್ರಿ ಬಗ್ಗೆ ನಿರ್ಧಾರ ಕೈಗೊಳ್ಳೋದಾಗಿ ತಿಳಿಸಿದ್ದಾರೆ.