News Karnataka Kannada
Friday, May 17 2024
ಬೆಂಗಳೂರು

ಭಯೋತ್ಪಾದಕ ದಾಳಿ: ದುರ್ಬಲ ವರ್ಸಸ್‌ ಬಲಿಷ್ಠ ಸರ್ಕಾರದ ಪೋಸ್ಟರ್‌ ಹಂಚಿಕೊಂಡ ಬಿಜೆಪಿ

Terror attack: BJP shares poster of weak vs strong government
Photo Credit : Twitter

ಬೆಂಗಳೂರು: ರಾಷ್ಟ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಅವಧಿಯಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಗಳನ್ನು ಪಟ್ಟಿ ಮಾಡಿರುವ ರಾಜ್ಯ ಬಿಜೆಪಿ ಕಾಂಗ್ರೆಸ್‌ ಸರ್ಕಾರವನ್ನು ದುರ್ಬಲ ಸರ್ಕಾರವೆಂದು ಬಿಜೆಪಿ ಟೀಕೆ ಮಾಡಿದೆ. ಈ ಕುರಿತು ಎಕ್ಸ್‌ ನಲ್ಲಿ ದುರ್ಬಲ ಸರ್ಕಾರ ವರ್ಸಸ್‌ ಬಲಿಷ್ಠ ಸರ್ಕಾರದ ಪೋಸ್ಟರ್‌ ಅನ್ನು ಬಿಜೆಪಿ ಹಂಚಿಕೊಂಡಿದೆ.

ಕಾಂಗ್ರೆಸ್‌ ಆಡಳಿತದ 2008 ರ ನವೆಂಬರ್‌ 26 ರಂದು ಮುಂಬೈಯಲ್ಲಿ ನಡೆದಿದ್ದ ದಾಳಿಯನ್ನು ನೆನಪಿಸಿದೆ. ‘2008 ರ ನವೆಂಬರ್‌ 26 ರಂದು ಮುಂಬೈಯಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಳಿಕ ಅಂದಿನ ಕಾಂಗ್ರೆಸ್ ಸರ್ಕಾರ ಭಯೋತ್ಪಾದಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಆದರೆ, 2016 ರಲ್ಲಿ ನಡೆದ ಉರಿ ಭಯೋತ್ಪಾದಕ ದಾಳಿಯ ಬಳಿಕ ಪ್ರಧಾನಿ ಮೋದಿ ಸರ್ಕಾರವು ಭಾರತೀಯ ಸೇನೆಗೆ ಸಂಪೂರ್ಣ ಸ್ವತಂತ್ರ ನೀಡಿತು. ಸೇನೆಯು ಪಾಕಿಸ್ಥಾನದ ನೆಲದೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿತು ಮತ್ತು ಭಯೋತ್ಪಾದಕರ ಅಡಗುತಾಣಗಳನ್ನು ಧ್ವಂಸ ಮಾಡಿತು.’ ಎಂದಿದೆ.

ಹಾಗೇ, ಕಾಂಗ್ರೆಸ್ ಗ್ಯಾರಂಟಿ ವಿಚಾರವನ್ನೂ ಪ್ರಸ್ತಾಪಿಸಿ ಮತ್ತೊಂದು ಟ್ವೀಟ್ ಮೂಲಕ ಬಿಜೆಪಿ ಇನ್ನೊಂದು ಆರೋಪ ಮಾಡಿದೆ. ‘ಕರ್ನಾಟಕವನ್ನು ಸಂಪೂರ್ಣ ಅಂಧಕಾರದಲ್ಲಿರಿಸಿರುವ ಕಾಂಗ್ರೆಸ್‌ ರಾಜ್ಯದ ಜನತೆಯ ಶ್ರಮದ ತೆರಿಗೆ ಹಣವನ್ನು, 80% ಕಮಿಷನ್ ರೂಪದಲ್ಲಿ ವಸೂಲಿ ಮಾಡಿ, ಪಂಚ ರಾಜ್ಯಗಳ ಚುನಾವಣೆಗೆ ಫಂಡಿಂಗ್ ಮಾಡುತ್ತಿದೆ.

ಇದು ಕಾಂಗ್ರೆಸ್‌ನ ಅಸಲಿ ಕರ್ನಾಟಕ ಮಾಡೆಲ್. ಇದಕ್ಕೆ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನ ಮನೆಯಲ್ಲಿ ದೊರೆತ ₹42 ಕೋಟಿ ಹಣವೇ ಪ್ರಮುಖ ಸಾಕ್ಷಿ. ರಾಜ್ಯವನ್ನು ಹಾಡುಹಗಲೇ ಈ ಪರಿ ಲೂಟಿ ಮಾಡುತ್ತಿರುವ ಈ ನಾಡದ್ರೋಹಿಗಳು, ಕರ್ನಾಟಕವನ್ನು ದಿವಾಳಿಯತ್ತ ಕೊಂಡೊಯ್ಯುವುದು ಗ್ಯಾರಂಟಿ..!!’ ಎಂದು ಬಿಜೆಪಿ ಎಕ್ಸ್‌ ನಲ್ಲಿ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು