ಬೆಂಗಳೂರು: ರಾಜ್ಯ ರಾಜಧಾನಿಯ ಮೂಲಸೌಕರ್ಯಗಳ ಸಮರ್ಪಕ ನಿರ್ವಹಣೆಯಲ್ಲಿ ಸೋತಿದೆಯೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ಬೆಂಗಳೂರುನಲ್ಲಿ ಉಂಟಾಗಿರುವ ನೀರಿನ ಬಿಕ್ಕಟ್ಟನ್ನು ಉಲ್ಲೇಖಿಸಿ ಮಾತನಾಡಿದ ಮೋದಿ, ʼಕಾಂಗ್ರೆಸ್ ಸರ್ಕಾರ ಟೆಕ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆʼ ಎಂದರು.
ಕಾಂಗ್ರೆಸ್ ಪಕ್ಷವನ್ನು ಖಾಸಗಿ ವಲಯ ವಿರೋಧಿ, ತೆರಿಗೆ ವಿರೋಧಿ, ಸಂಪತ್ತು ಗಳಿಕೆಯ ವಿರೋಧಿ ಎಂದು ಕರೆದಿರುವ ಪ್ರಧಾನಿ, ಅವರ ಗಮನ ಮೋದಿಯ ಮೇಲಿದೆ, ನನ್ನ ಗಮನ ಭಾರತದ ಅಭಿವೃದ್ಧಿಯ ಕಡೆಯಿದೆ ಎಂದರು.
ಈ ಚುನಾವಣೆಗಳಲ್ಲಿ ನಾವು ನಮ್ಮ ಸಾಧನೆಗಳ ಪಟ್ಟಿಯನ್ನು ಹಿಡಿದುಕೊಂಡು ಮತ ಕೇಳುತ್ತಿದ್ದರೆ, ಕಾಂಗ್ರೆಸ್ ತನ್ನ ಹಳೇ ಟೇಪ್ರೆಕಾರ್ಡರ್ ಹಿಡಿದುಕೊಂಡು ತಿರುಗಾಡುತ್ತಿದೆ ಎಂದು ಟೀಕಿಸಿದರು.