ಬೆಂಗಳೂರು: ಕೆಲವೇ ಕ್ಷಣಗಳಲ್ಲಿ ಬೆಂಗಳೂರಿಗೆ ಸ್ಪಂದನಾ ಮೃತದೇಹ ತಲುಪಲಿರುವ ಹಿನ್ನೆಲೆ ಬಿ.ಕೆ. ಹರಿಪ್ರಸಾದ್, ಸ್ಪಂದನಾ ಸಹೋದರ ರಕ್ಷಿತ್ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ.
ಅವರ ಜೊತೆ ಅವರ ಸ್ನೇಹಿತರೂ ಇದ್ದಾರೆ. ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ( 2023 ಆಗಸ್ಟ್ 7 ) ಬ್ಯಾಂಕಾಕ್ನ ಪ್ರವಾಸದಲ್ಲಿದ್ದಾಗ ಹೃದಯಾಘಾತದಿಂದ ನಿಧನರಾಗಿದ್ದರು.
ಸ್ಪಂದನಾ ಮೂಲತಃ ಬೆಳ್ತಂಗಡಿಯವರು. ಪತಿ ವಿಜಯ್ ರಾಘವೇಂದ್ರ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದರು.