ಬೆಂಗಳೂರು : ತಾಯಿಯನ್ನು ಉಸಿರುಗಟ್ಟಿಸಿ ಕೊಂದಿದ್ದ ಮಗನಿಗೆ CCH 65 ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ತೀರ್ಪುನೀಡಿದೆ.
2018 ರ ಜೂನ್ 13 ರಂದು ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಮನೆ ಮಾರಾಟ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿ ಕಾತ್ಯಾಯಿನಿ ಎಂಬುವವರ ಜೊತೆ ಜಗಳವಾಡಿದ್ದ. ಇದಾದ ಬಳಿಕ ರೊಚ್ಚಿಗೆದ್ದ ಶರತ್, ತಾಯಿಯ ಮೂಗು ಮತ್ತು ಬಾಯಿಯನ್ನು ಬಲವಾಗಿ ಮುಚ್ಚಿ ಉಸಿರುಗಟ್ಟಿಸಿ ಕೊಂದಿದ್ದ. ಇಷ್ಟೇ ಅಲ್ಲ, ಬಳಿಕ ಸಾಕ್ಷ್ಯಾಧಾರಗಳ ನಾಶಕ್ಕೂ ಯತ್ನಿಸಿದ್ದ ಆರೋಪಿ ಶರತ್ ಕುಮಾರ್ಗೆ IPC ಕಲಂ 302 ಕ್ಕೆ ಜೀವಾವಧಿ ಶಿಕ್ಷೆ, ಹಾಗೂ ಕಲಂ 201 ಸಾಕ್ಷಿ ನಾಶಪಡಿಸಿದಕ್ಕೆ 3 ವರ್ಷ ಶಿಕ್ಷೆ ವಿಧಿಸಲಾಗಿದೆ.