Bengaluru 23°C
Ad

ರೇಣುಕ ಸ್ವಾಮಿ ಕಿವಿ ಕತ್ತರಿಸಿ ಕ್ರೂರವಾಗಿ ಹಲ್ಲೆ : ದರ್ಶನ್‌ ಗ್ಯಾಂಗ್‌ ವಿರುದ್ಧ ಆಕ್ರೋಶ

ಈಗಾಗಲೇ ತನಿಖೆ ನಡೆಸುತ್ತಿರುವ ಪೊಲೀಸರು, ರೇಣುಕಾಸ್ವಾಮಿ ಕೊಲೆ ಯಾರು ಮಾಡಿದ್ರು, ಯಾಕೆ ಮಾಡಿದ್ರು, ಹೇಗೆ ಮಾಡಿದ್ರು ಅನ್ನೋ ಬಗ್ಗೆ ಇಂಚಿಂಚೂ ಶೋಧಿಸುತ್ತಿದ್ದಾರೆ. ಈ ನಡುವೆ ರೇಣುಕಾಸ್ವಾಮಿಯ ಭೀಕರವಾಗಿ ಕೊಲೆ ಆಗಿರೋ ಬಗ್ಗೆ ಫೋಟೋಗಳು ಸಾಕ್ಷಿ ನುಡಿಯುತ್ತಿವೆ.

ಬೆಂಗಳೂರು:  ಈಗಾಗಲೇ ತನಿಖೆ ನಡೆಸುತ್ತಿರುವ ಪೊಲೀಸರು, ರೇಣುಕಾಸ್ವಾಮಿ ಕೊಲೆ ಯಾರು ಮಾಡಿದ್ರು, ಯಾಕೆ ಮಾಡಿದ್ರು, ಹೇಗೆ ಮಾಡಿದ್ರು ಅನ್ನೋ ಬಗ್ಗೆ ಇಂಚಿಂಚೂ ಶೋಧಿಸುತ್ತಿದ್ದಾರೆ. ಈ ನಡುವೆ ರೇಣುಕಾಸ್ವಾಮಿಯ ಭೀಕರವಾಗಿ ಕೊಲೆ ಆಗಿರೋ ಬಗ್ಗೆ ಫೋಟೋಗಳು ಸಾಕ್ಷಿ ನುಡಿಯುತ್ತಿವೆ.

Ad
300x250 2

ರೇಣುಕಾಸ್ವಾಮಿ ವೃಷಣವೇ ಒಡೆದು ಹೋಗುವಂತೆ ಭೀಕರವಾಗಿ ಹಲ್ಲೆ ಮಾಡಲಾಗಿದೆ. ಈ ಫೋಟೋಗಳನ್ನು ನೋಡಿದ್ರೆ ನೀವು ಬೆಚ್ಚಿಬೀಳುತ್ತೀರಿ! ಈ ಫೋಟೋಗಳು ಭಯ ಹುಟ್ಟಿಸುವಂತಿದ್ದು, ಕೊಲೆಗಾರರು ಯಾರೇ ಆಗಿರಲಿ ಅವರು ಮಾತ್ರ ರಾಕ್ಷಸರೇ ಎನ್ನುವಂತಿದೆ ಹಲ್ಲೆಯ ಫೋಟೋಗಳು!

ರೇಣುಕಾಸ್ವಾಮಿ ಮುಖ ಮೂತಿ ನೋಡದೆ ಹೊಡೆದಿರೋದು ಫೋಟೋಗಳಿಂದ ಗೊತ್ತಾಗಿದೆ. ದೇಹ, ಮೈ, ಕೈ, ತಲೆ, ಮರ್ಮಾಂಗ, ವೃಷಣ ಸೇರಿದಂತೆ ಸಿಕ್ಕಸಿಕ್ಕಲ್ಲಿ ರಾಕ್ಷಸರಂತೆ ಹೊಡೆಯಲಾಗಿದೆ. ವೃಷಣದ ರಕ್ತ ಹೆಪ್ಪುಗಟ್ಟುವಂತೆ ಹಲ್ಲೆ ಮಾಡಲಾಗಿದೆ. ಮೈಮೇಲೆ ಕರೆಂಟ್ ಶಾಕ್ನ ಮಾರ್ಕ್ ಇದೆ. ಇದು ಕರೆಂಟ್ ಶಾಕೋ ಅಥವಾ ಸುಟ್ಟಿರೋದು ಅನ್ನೋ ಅನುಮಾನ ಇದೆ.

ಕೈ ಮೇಲೆ ಶಾಕ್ನ ಗುರುತಿನ ಜೊತೆಗೆ ಕುತ್ತಿಗೆ ಮೇಲೆ ಶಾಕ್ನ ಗುರುತು ಕಂಡು ಬಂದಿದೆ. ಮೈ ಕೈ ಬಣ್ಣ ಕಪ್ಪಾಗಿದೆ. ಬೆನ್ನಿನ ಮೇಲೆ ಶಾಕ್ನ ಗುರುತುಇದೆ. ಕೈ ಮೇಲಿನ ಹಚ್ಚೆ ಕಿತ್ತೆಸೆದು ವಿಕೃತಿ ಮೆರೆಯಲಾಗಿದೆ.

Ad
Ad
Nk Channel Final 21 09 2023
Ad