Categories: ರಾಮನಗರ

ರಾಮನಗರ: ರಾಮನಗರದಲ್ಲಿ  ಮಣ್ಣಿನಡಿ ಅಪರೂಪದ ಕಟ್ಟಡ ಪತ್ತೆ

ರಾಮನಗರ: ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸುಲ್ತಾನ್ ಕಾಲದ ಬಂಧಿಖಾನೆ ಮತ್ತು ಮದ್ದಿನ ಮನೆ ಹೋಲುವ ಕಟ್ಟಡವೊಂದು ರಾಮನಗರದ  ರೈಲ್ವೆ ನಿಲ್ದಾಣದ ರಸ್ತೆ ಬದಿಯಲ್ಲಿರುವ ಯೂಕೋ ಬ್ಯಾಂಕ್ ಪಕ್ಕದಲ್ಲಿರುವ ಕುಮುಂದಾನ್ ಮೊಹಲ್ಲಾ ನಿವಾಸಿ ನವಾಜ್ ಷರೀಫ್  ಎಂಬುವರಿಗೆ ಸೇರಿದ  ಖಾಲಿ ನಿವೇಶನದಲ್ಲಿ ಪತ್ತೆಯಾಗಿದೆ.

ಹೊಸ ಕಟ್ಟಡ ನಿರ್ಮಾಣ ಮಾಡಲು ಫಿಲ್ಲರ್  ಹಾಕಲು ಜೆಸಿಬಿ ಸಹಾಯದಿಂದ ಭೂಮಿಯನ್ನು ಅಗೆಯುತ್ತಿದ್ದ ವೇಳೆ ನೆಲಮಟ್ಟದಲ್ಲಿ ಗಟ್ಟಿಯಾದ ಗೋಡೆ ಗೋಚರಿಸಿದೆ. ಈ ಗೋಡೆಯನ್ನು ಕೊರೆದು ನೋಡಿದಾಗ ಒಳ ಭಾಗದಲ್ಲಿ ನಾಲ್ಕು ಕಮಾನುಗಳಿದ್ದ  ಕಟ್ಟಡವೊಂದು ಕಾಣಿಸಿದೆ. ಈ ಕಟ್ಟಡದ ಮಧ್ಯ ಭಾಗದಲ್ಲಿ ಕಮಾನುಗಳಿದ್ದು, ನಾಲ್ಕು ಭಾಗವೂ ಗೋಡೆಯಿಂದ ಆವೃತವಾಗಿದೆ. ಇದು ಟಿಪ್ಪು ಕಾಲದ ಬಂಧಿಖಾನೆ ಮತ್ತು ಮದ್ದಿನ ಮನೆಯನ್ನು ಹೋಲುತ್ತಿರುವುದು ಕಂಡು ಬಂದಿದೆ.

ಈ ಜಾಗದಲ್ಲಿದ್ದ ಹೆಂಚಿನ ಮನೆಗಳನ್ನು ಕೆಡವಿ ಅಂಗಡಿ ಮಳಿಗೆ ನಿರ್ಮಿಸಲಾಗಿತ್ತು. ಈಗ ಅಂಗಡಿ ಮಳಿಗೆಯನ್ನೂ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಕಾರ್ಯಕ್ಕೆ ನಿವೇಶನದ ಮಾಲೀಕರು ಮುಂದಾಗಿದ್ದರು. ನೆಲಮಟ್ಟದಲ್ಲಿ ಕಟ್ಟಡ ಕಾಣಿಸಿರುವುದು ನಿವೇಶನ ಮಾಲೀಕರಿಗೂ ಆಶ್ಚರ್ಯ ಉಂಟು ಮಾಡಿದೆ.

ನೆಲಮಟ್ಟದಲ್ಲಿ ಕಟ್ಟಡ ಪತ್ತೆಯಾದ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ  ಕಾಡ್ಗಿಚ್ಚಿ ಹರಡಿದ ಹಿನ್ನೆಲೆಯಲ್ಲಿ ನೂರಾರು ಜನರು ಆಗಮಿಸಿ ಸ್ಥಳ ವೀಕ್ಷಿಸಿದ್ದು. ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಅವರ ಆಳ್ವಿಕೆಯ ಕಾಲದಲ್ಲಿ ಮದ್ದು ಗುಂಡುಗಳನ್ನು ಬಿಸಿಲು ಮಳೆಯಿಂದ ಸಂರಕ್ಷಿಸಿಡಲು ಮದ್ದಿನ ಮನೆ (ಶಸ್ತ್ರಾಗಾರ) ವಿಶೇಷ ಕಟ್ಟಡಗಳನ್ನು ನಿರ್ಮಿಸುತ್ತಿದ್ದರು. ಮದ್ದು ಗುಂಡುಗಳು ಹೆಚ್ಚು ಅವಧಿವರೆಗೂ ಕೆಡದಂತೆ ನೋಡಿಕೊಳ್ಳುವ ವಿಶೇಷ ತಂತ್ರಗಾರಿಕೆಯನ್ನು ಮದ್ದಿನ ಮನೆಗೆ ಅಳವಡಿಸಲಾಗಿತ್ತು. ಇದೇ ಮಾದರಿಯಲ್ಲಿ ಬಂಧಿಖಾನೆಗಳನ್ನು  ನಿರ್ಮಾಣ ಮಾಡುತ್ತಿದ್ದರು.

ಶ್ರೀರಂಗಪಟ್ಟಣದಲ್ಲಿರುವ ಮದ್ದಿನ ಮನೆ ಚುರಕಿ ಗಾರೆಯಿಂದ (ಸುಣ್ಣ, ಸುಟ್ಟ ಇಟ್ಟಿಗೆ, ಮರವಜ್ರ ಮಿಶ್ರಣ) ಬಳಸಿ ನಿರ್ಮಿಸಿದ್ದಾಗಿದೆ. ರಾಮನಗರದಲ್ಲಿ ಗೋಚರಿಸಿರುವ ಗೋಡೆಯೂ ಒಂದು  ಮೀಟರ್ ದಪ್ಪ ಇದ್ದು, ಮೇಲ್ಭಾಗದಲ್ಲಿ ಬೆಳಕಿನ ಕಿಂಡಿ ಇಡಲಾಗಿದೆ. ಇದಕ್ಕೂ ಶ್ರೀರಂಗಪಟ್ಟಣದ ಕಟ್ಟಡಕ್ಕೂ ಸಾಮ್ಯತೆ ಕಾಣುತ್ತಿದೆ. ಟಿಪ್ಪು ಸುಲ್ತಾನ್ ರಾಮನಗರದ ಜಾಮಿಯಾ ಮಸೀದಿ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಿರುವುದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ಅಲ್ಲದೆ, ಟಿಪ್ಪು ಕಾಲದ ಇನ್ನಷ್ಟು ಕಟ್ಟಡಗಳು ನೆಲದಲ್ಲಿ ಹುದುಗಿ ಹೋಗಿರುವ ಸಾಧ್ಯತೆಗಳಿವೆ. ಈಗ ಕಟ್ಟಡ ಪತ್ತೆಯಾದ ಕುಮುದಾನ್ ಮೊಹಲ್ಲಾದಲ್ಲಿಯೇ ಟಿಪ್ಪು ಕಾಲದ ಬಾವಿ, ಸುರಂಗವೂ ಪತ್ತೆಯಾಗಿತ್ತು ಎಂದು ಈ ಭಾಗದ ಹಿರಿಯರು ಹೇಳುತ್ತಿದ್ದಾರೆ.

ನಿವೇಶನದ ಮಾಲೀಕರಾದ ನವಾಜ್ ಅಹಮದ್ ಮಾತನಾಡಿ, ಈ ಜಾಗದಲ್ಲಿ ಹಳೇಯ ಕಟ್ಟಡವನ್ನು ತೆರವು ಮಾಡಿ ಹೊಸ ಅಂಗಡಿಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಹಿರಿಯರು ಇಲ್ಲೊಂದು ನೀರಿನ ಟ್ಯಾಂಕ್ ಇತ್ತೆಂದು ಹೇಳಿದ್ದರು. ಆ ನಂತರ ಅದು ಮಣ್ಣಿನಿಂದ ಭರ್ತಿಯಾಗಿರಬೇಕೆಂದು ನಾವು ಭಾವಿಸಿದ್ದೆವು. ನಮ್ಮ ಬಳಿಯಿರುವ ದಾಖಲೆಗಳ ಪ್ರಕಾರ 1932ರಲ್ಲಿ ಇಲ್ಲೊಂದು ವಾಟರ್ ಟ್ಯಾಂಕ್ ಇತ್ತು ಎಂದು ಉಲ್ಲೇಖವಾಗಿದೆ. 1965-67ರಲ್ಲಿ ಅಬ್ದುಲ್ ಅಜೀಂ ಎಂಬುವರು ಹರಾಜಿನಲ್ಲಿ ಪುರಸಭೆಯಿಂದ ಖರೀದಿಸಿದ್ದರು. ಅವರು ಜಾಗವನ್ನು ಬೇರೊಬ್ಬರಿಗೆ ದಾನ ಮಾಡಿದ್ದರು. 2009ರಲ್ಲಿ ನಾವು ಈ ಜಾಗವನ್ನು ಖರೀದಿ ಮಾಡಿದ್ದಾಗಿ ಹೇಳಿದ್ದಾರೆ.

Ashika S

Recent Posts

ಯುಎಇ ರಾಯಲ್‌ ಮನೆತನದ ಸದಸ್ಯನ ನಿಗೂಢ ಸಾವು

ಯುನೈಟೆಡ್ ಅರಬ್ ಎಮಿರೇಟ್ಸ್‌ನ  ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…

3 hours ago

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

4 hours ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

4 hours ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

5 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

6 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

6 hours ago