ರಾಮನಗರ: ರಾತ್ರಿ 2ರಿಂದ ಬೆಳಗ್ಗೆ 4ರವರೆಗೆ ನಾನು ನಿದ್ದೆ ಮಾಡಲ್ಲ. ಕಳೆದ ಬಾರಿ ಗಿಫ್ಟ್ ಹಂಚಿಕೆ ತರಹ ಮತ್ತೆ ಆಗೋದಕ್ಕೆ ನಾವ್ಯಾರು ಬಿಡಲ್ಲ. ಈ ಬಾರಿ ಅವರ ಸೋಲು ಖಚಿತ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆ ವಿಚಾರವಾಗಿ ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಗಿಫ್ಟ್ ಹಂಚಿರೋದು ನಮಗೆ ಗೊತ್ತಿದೆ. ಈ ಬಾರಿ ಆ ಇತಿಹಾಸ ಮರುಕಳಿಸಲ್ಲ. ಬಿಜೆಪಿ ಅಲೆ ಡಿಕೆ ಬ್ರದರ್ಸ್ 2 ತಾಸಿನಲ್ಲಿ ಬದಲಿಸುತ್ತಾರೆ. ಅದಕ್ಕೆ ಈ ಬಾರಿ ನಾನು ಆ ಎರಡು ದಿನ ಮಲಗುವುದಿಲ್ಲ ಎಂದು ಹೇಳಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಒಂದಷ್ಟು ಜನ ಹೋಗುವುದು, ಮತ್ತೊಂದಷ್ಟು ಜನ ಬರುತ್ತಾರೆ. ಅದಕ್ಕೆ ಪ್ರಾಮುಖ್ಯತೆ ಕೊಡುವುದ ಬೇಡ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗಳು ಸಾಕಷ್ಟು ಬಲಿಷ್ಠವಾಗಿದೆ. ಎರಡು ಪಕ್ಷಗಳ ಕಾರ್ಯಕರ್ತರು ಪರಸ್ಪರವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಮತದಾರರು ತಿರ್ಮಾನ ಮಾಡಿದ್ದಾರೆ ಖಂಡಿತವಾಗಿಯೂ ಡಾ. ಸಿಎನ್ ಮಂಜುನಾಥ್ ಅವರಿಗೆ ಗೆಲುವು ಸಾಧಿಸುತ್ತಾರೆ ಎಂದು ಹೇಳಿದ್ದಾರೆ.