ರಾಮನಗರ: ಇತ್ತೀಚೆಗೆ ವಿಕೃತ ಮನಸ್ಸಿನ ಜನರಿಂದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ಎಸೆಯುವ ಪ್ರಕರಣಗಳು ಹೆಚ್ಚುತ್ತಿದೆ. ಸುಂದರವಾದ ರೈಲಿನ ಗಾಜುಗಳನ್ನು ಕಂಡಕೂಡಲೇ ಮರೆಯಲ್ಲಿ ನಿಂತು ರೈಲಿನ ಮೇಲೆ ಕಲ್ಲೆಸೆದು ಹೇಡಿಗಳಂತೆ ಪರಾರಿಯಾಗುತ್ತಿದ್ದಾರೆ.
ಇಂದು ರಾಮನಗರದ ಹೊರವಲಯದಲ್ಲಿ ಮೈಸೂರಿನಿಂದ ಚನ್ನೈಗೆ ತೆರಳುವ ವಂದೇ ಭಾರತ್ ರೈಲಿನ ಮೇಲೆ ಕಿಡಿಗೇಡಿಗಳು ಮತ್ತೆ ಕಲ್ಲೆಸೆದಿದ್ದು, ಗಾಜು ಪುಡಿ ಪುಡಿಯಾಗಿದೆ. ತಿಂಗಳಲ್ಲೇ ನಾಲ್ಕೈದು ಬಾರಿ ಕಲ್ಲು ಎಸೆಯಲಾಗಿದೆ. ಕಿಟಕಿ ಗಾಜು ಪುಡಿ ಪುಡಿಯಾಗಿ ಸೀಟಿನ ಮೇಲೆ ಬಿದ್ದಿವೆ.