ರಾಮನಗರ: ಬಸ್ ಹರಿದು ಬಾಲಕಿ ಸಾವನ್ನಪ್ಪಿದ ಘಟನೆ ಮಾಗಡಿ ತಾಲ್ಲೂಕಿನ ಹೊನ್ನಾಪುರದ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ.
ಮೃತ ಬಾಲಕಿಯನ್ನು ಜೀವಿತಾ (6) ಎಂದು ಗುರುತಿಸಲಾಗಿದೆ.
ಬಾಲಕಿ ಬೆಂಗಳೂರಿನಿಂದ ತನ್ನ ಅಜ್ಜಿ ಜತೆ ಉಜ್ಜಿನಿಗೆ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಬಸ್ ನ ಟೈರ್ ಸ್ಫೋಟಗೊಂಡಿದ್ದು, ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಈ ಸಂದರ್ಭ ಬಸ್ ನ ಮುಂಭಾಗದ ಗಾಜಿನ ಬಳಿಯೇ ಕುಳಿತಿದ್ದ ಬಾಲಕಿ, ನಿಯಂತ್ರಣ ತಪ್ಪಿ ಗಾಜು ಒಡೆದುಕೊಂಡು ಬಸ್ ನ ಮುಂದೆಯೇ ಬಿದ್ದಿದ್ದಾಳೆ. ನಂತರ ಅದೇ ಬಸ್ ನ ಮುಂಭಾಗದ ಚಕ್ರ ಬಾಲಕಿ ಮೇಲೆ ಹರಿದಿದೆ. ಇದರಿಂದ ಸ್ಥಳದಲ್ಲೇ ಬಾಲಕಿ ಮೃತಪಟ್ಟಿದ್ದಾಳೆ.