News Karnataka Kannada
Monday, May 06 2024
ರಾಮನಗರ

ರಾಮನಗರ: ಬಸ್ ಹರಿದು ಬಾಲಕಿ ಸಾವು

Accident Ckm Car Main 08072021
Photo Credit :

ರಾಮನಗರ: ಬಸ್ ಹರಿದು ಬಾಲಕಿ ಸಾವನ್ನಪ್ಪಿದ ಘಟನೆ ಮಾಗಡಿ ತಾಲ್ಲೂಕಿ‌ನ ಹೊನ್ನಾಪುರದ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ.

ಮೃತ ಬಾಲಕಿಯನ್ನು ಜೀವಿತಾ (6) ಎಂದು ಗುರುತಿಸಲಾಗಿದೆ.

ಬಾಲಕಿ ಬೆಂಗಳೂರಿನಿಂದ ತನ್ನ ಅಜ್ಜಿ ಜತೆ ಉಜ್ಜಿನಿಗೆ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಬಸ್ ನ ಟೈರ್ ಸ್ಫೋಟಗೊಂಡಿದ್ದು, ಚಾಲಕ‌ ಏಕಾಏಕಿ  ಬ್ರೇಕ್ ಹಾಕಿದ್ದಾನೆ.  ಈ ಸಂದರ್ಭ ಬಸ್ ನ ಮುಂಭಾಗದ ಗಾಜಿನ ಬಳಿಯೇ ಕುಳಿತಿದ್ದ ಬಾಲಕಿ, ನಿಯಂತ್ರಣ ತಪ್ಪಿ ಗಾಜು ಒಡೆದುಕೊಂಡು ಬಸ್ ನ ಮುಂದೆಯೇ ಬಿದ್ದಿದ್ದಾಳೆ. ನಂತರ ಅದೇ ಬಸ್ ನ ಮುಂಭಾಗದ ಚಕ್ರ ಬಾಲಕಿ ಮೇಲೆ ಹರಿದಿದೆ. ಇದರಿಂದ ಸ್ಥಳದಲ್ಲೇ ಬಾಲಕಿ ಮೃತಪಟ್ಟಿದ್ದಾಳೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು