Bengaluru 28°C
Ad

ಪ್ರಜ್ವಲ್‌ಗೇ ಖಿನ್ನತೆ ಆಗಿದ್ರೆ ಸಂತ್ರಸ್ತೆಯರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ ಪ್ರಿಯಾಂಕ್‌ ಖರ್ಗೆ

ಪ್ರಜ್ವಲ್ ಸಲೂನ್ ಹೋಗಿ, ಕ್ಲೀನ್ ಆಗಿ ಬಂದು ವಿಡಿಯೋ ಮಾಡಿದ್ದಾರೆ. ಅದರಲ್ಲಿ ಖಿನ್ನತೆ ಏನಾದ್ರೂ ಕಾಣ್ತಾ ಇದಿಯಾ? ಇವರಿಗೇ ಖಿನ್ನತೆ ಆಗಿದ್ದರೇ ಸಂತ್ರಸ್ತೆಯರ ಪರಿಸ್ಥಿತಿ ಏನು? ಅಂತ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು: ಪ್ರಜ್ವಲ್ ಸಲೂನ್ ಹೋಗಿ, ಕ್ಲೀನ್ ಆಗಿ ಬಂದು ವಿಡಿಯೋ ಮಾಡಿದ್ದಾರೆ. ಅದರಲ್ಲಿ ಖಿನ್ನತೆ ಏನಾದ್ರೂ ಕಾಣ್ತಾ ಇದಿಯಾ? ಇವರಿಗೇ ಖಿನ್ನತೆ ಆಗಿದ್ದರೇ ಸಂತ್ರಸ್ತೆಯರ ಪರಿಸ್ಥಿತಿ ಏನು? ಅಂತ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನೆ ಮಾಡಿದ್ದಾರೆ.

Ad
300x250 2

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ಪ್ರಜ್ವಲ್ ವಿಡಿಯೋವೊಂದನ್ನು ರಿಲೀಸ್ ಮಾಡಿರೋದು ಅಚ್ಚರಿ ಆಗುತ್ತಿದೆ. 6-7 ಹಂತಹಳ ಚುನಾವಣೆ ಆದ್ಮೇಲೆ ಹೊರಬಂದಿದ್ದಾರೆ.

30 ದಿನಗಳ ಹಿಂದೆ ನಿಮ್ಮ ಸ್ವಾಭಿಮಾನ ಮರ್ಯಾದೆ ನೆನಪಿರಲಿಲ್ವಾ? ನಿಮ್ಮ ಸ್ವಾಭಿಮಾನ, ಕುಟುಂಬದ ಮರ್ಯಾದೆಗಿಂತಲೂ ದೊಡ್ಡದು ವಿದೇಶದಲ್ಲಿ ಏನಿತ್ತು? ಎಂದು ವಾಗ್ದಾಳಿ ನಡೆಸಿದ್ದಾರೆ.

ಅಮಿತ್ ಶಾ ಅವರೋ ಅಥವಾ ಬಿಜೆಪಿಯವರೋ ವಿಡಿಯೋ ಮಾಡಿ ಹೊರಗೆ ಬಾ ಅಂದಿರಬೇಕು. ಇದೆಲ್ಲವೂ ಬಿಜೆಪಿ ನಾಯಕರ ನಿರ್ದೇಶನದ ಮೇರೆಗೆ ನಡೆದಿದೆ ಅಂತ ಆರೋಪಿಸಿದ್ದಾರೆ.

 

Ad
Ad
Nk Channel Final 21 09 2023
Ad