ಬೆಂಗಳೂರು : ಯುಗಾದಿ ಹಬ್ಬದ ಪ್ರಯುಕ್ತ ಪಟ್ಟಣದ ಪ್ರಸಿದ್ಧ ದೈವೀ ಕ್ಷೇತ್ರಗಳಾದ ಗವಿಮಠ, ಶ್ರೀ ಅಜಾತ ನಾಗಲಿಂಗಸ್ವಾಮಿ ಮಠ, ಶ್ರೀ ಪಂಚಗ್ರಹ ಹಿರೇಮಠಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಮಠದ ಪೀಠಾಧಿಪತಿಗಳಾದ ಬಸವಲಿಂಗ ಸ್ವಾಮೀಜಿ, ವೀರೇಂದ್ರ ಸ್ವಾಮೀಜಿ, ಸಿದ್ದೇಶ್ವರ ಶಿವಾಚಾರ್ಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಷಣ್ಮುಖ ಗುರಿಕಾರ, ಅಣ್ಣಪ್ಪ ಬಾಗಿ, ಸಿದ್ದನಗೌಡ ಪಾಟೀಲ, ಶರಣಪ್ಪಗೌಡ ದಾನಪ್ಪಗೌಡ್ರ, ಶಾಂತಕ್ಕ ನಿಡೋಣಿ, ಚನ್ನು ಹೊಸಮನಿ, ಶಾಂತಕ್ಕ ನಿದವಣಿ, ಸುರೇಶ ಗಾಣಿಗೇರ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು