News Karnataka Kannada
Monday, April 29 2024
ಬೆಂಗಳೂರು

ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ತಯಾರಾದ ಈರುಳ್ಳಿ

ಬೆಳ್ಳುಳ್ಳಿ ನಂತರ ಈಗ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಈರುಳ್ಳಿ ಅಣಿಯಾಗಿ ನಿಂತಿದ್ದು, ಗೃಹಿಣಿಯರ ಕೈಗೆ ಎಟುಕದೇ ಅಡುಗೆಮನೆ ಸಾಮ್ರಾಜ್ಯವನ್ನೂ ಸುಪರ್ದಿಗೆ ಪಡೆಯಲು ಈರುಳ್ಳಿ ಸಜ್ಜಾಗಿದೆ.
Photo Credit : Pixabay

ಬೆಂಗಳೂರು: ಬೆಳ್ಳುಳ್ಳಿ ನಂತರ ಈಗ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಈರುಳ್ಳಿ ಅಣಿಯಾಗಿ ನಿಂತಿದ್ದು, ಗೃಹಿಣಿಯರ ಕೈಗೆ ಎಟುಕದೇ ಅಡುಗೆಮನೆ ಸಾಮ್ರಾಜ್ಯವನ್ನೂ ಸುಪರ್ದಿಗೆ ಪಡೆಯಲು ಈರುಳ್ಳಿ ಸಜ್ಜಾಗಿದೆ.

ಈರುಳ್ಳಿ ಮೇಲಿನ ರಫ್ತು ನಿಷೇಧವನ್ನ ತೆಗದುಹಾಕಲು ಕೇಂದ್ರ ಸರ್ಕಾರ ಸಜ್ಜಾಗಿದೆ ಅಂತ ಹೇಳಲಾಗ್ತಿದೆ. ಈ ಹಿನ್ನಲೆ ದೇಶದಲ್ಲಿ ಈರುಳ್ಳಿ ದರ ಏರಿಕೆ ಕಂಡಿದೆ.

ದೇಶದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾದ ಲಸಲ್​ಗಾಂವ್​ನಲ್ಲಿ ಸಾಮಾನ್ಯ ಈರುಳ್ಳಿಯ ಸಗಟು ಮಾರಾಟ ದರ ಕ್ಷಿಂಟಾಲ್​ಗೆ 1800 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಶೇ.40ರಷ್ಟು ಈರುಳ್ಳಿ ಬೆಲೆಯಲ್ಲಿ ಹೆಚ್ಚಳ ಕಂಡಿದೆ.

ಇದೇ ಈರುಳ್ಳಿ ದರ ಫೆಬ್ರವರಿ 17ರಂದು ಕ್ವಿಂಟಾಲ್​ಗೆ 1,280 ರೂಪಾಯಿ ಇದ್ದಿದ್ದು ಕೇವಲ ಮೂರೇ ದಿನಕ್ಕೆ 520 ರೂಪಾಯಿಯಷ್ಟು ಹೆಚ್ಚಳವಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳುಳ್ಳಿ ದರ ಕೆ.ಜಿಗೆ 500 ರೂಪಾಯಿ ದಾಟಿದೆ. ಮಹಾರಾಷ್ಟ್ರದಲ್ಲಿ ಪ್ರತಿ ಕೆ.ಜಿ ಬೆಳ್ಳುಳ್ಳಿ ಬೆಲೆ 600 ರೂಪಾಯಿಯಾಗಿದೆ. ರಾಜ್ಯದಲ್ಲೂ ಬೆಳ್ಳುಳ್ಳಿ ಬೆಲೆ 540 ರೂಪಾಯಿಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.

ಒಟ್ಟಿನಲ್ಲಿ 600 ರೂಪಾಯಿ ಸನಿಹದಲ್ಲಿರೋ ಬೆಳ್ಳುಳ್ಳಿಗೆ ಠಕ್ಕರ್​ ಕೊಡೋಕೆ ಈರುಳ್ಳಿ ಸಹ ಸಜ್ಜಾಗಿ ನಿಂತಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸಲು ಅಣಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು