ಬೆಂಗಳೂರು: ತಮಿಳುನಾಡಿಗೆ ಕೆಆರ್ ಎಸ್ ಡ್ಯಾಂನಿಂದ ನೀರು ಬಿಡುಗಡೆ ಮಾಡುತ್ತಿರುವ ವಿಚಾರವನ್ನು ವಿರೋಧಿಸಿ ನಾಳೆ (ಆಗಸ್ಟ್ 21)ರಂದು ಬಿಜೆಪಿ ಬೆಂಗಳೂರು – ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಉದ್ದೇಶಿಸಿತ್ತು.
ಆದರೆ ಇದೀಗ ಹೆದ್ದಾರಿ ತಡೆ ಬದಲಿಗೆ ಮಂಡ್ಯದ ಸಂಜಯ್ ಸರ್ಕಲ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಬೆಂಗಳೂರು ಮೈಸೂರು ಹೆದ್ದಾರಿ ತಡೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದು, ಇದೇ ಕಾರಣದಿಂದ ಇಂಡುವಾಳದಿಂದ ಸಂಜಯ್ ವೃತ್ತಕ್ಕೆ ಪ್ರತಿಭಟನೆ ಸ್ಥಳ ಸ್ಥಳಾಂತರವಾಗಿದೆ.
ನಾಳೆ ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಮಾಡುವುದಿಲ್ಲ ಮತ್ತು ಮಾಡುವುದು ತಪ್ಪಾಗುತ್ತದೆ. ಮಂಡ್ಯದ ಸಂಜಯ್ ಸರ್ಕಲ್ ನಲ್ಲಿ ಪ್ರತಿಭಟನೆ ಇದೆ. ಧನ್ಯವಾದಗಳು. pic.twitter.com/rpmZr3PbNr
— Pratap Simha (@mepratap) August 20, 2023