News Karnataka Kannada
Saturday, May 11 2024
ಬೆಂಗಳೂರು

ಸ್ಟ್ರೋಕ್‌ ಒಳಗಾದ ಝೆರೋಧಾ ಸಹ ಸಂಸ್ಥಾಪಕ: ಮಹತ್ವದ ವಿಚಾರ ಹಂಚಿಕೊಂಡ ಉದ್ಯಮಿ !

ಭಾರತದ ಯುವ ಉದ್ಯಮಿ, ವಿಶ್ವ ಮಟ್ಟದಲ್ಲಿ ಭಾರಿ ಪ್ರಖ್ಯಾತಿ ಪಡೆದಿರುವ ಕರ್ನಾಟಕದ ನಿಖಿಲ್ ಕಾಮತ್ ಸ್ಟ್ರೋಕ್‌ನಿಂದ ಆಸ್ಪತ್ರೆ ದಾಖಲಾಗಿರುವ ಮಾಹಿತಿ ಬಹಿರಂಗವಾಗಿದೆ. 6 ವಾರಗಳ ಹಿಂದೆ ಸ್ಟ್ರೋಕ್‌ಗೆ ತುತ್ತಾಗಿ ಆಸ್ಪತ್ರೆ ದಾಖಲಾಗಿದ್ದೆ, ಇದೀಗ ನಿಧಾನವಾಗಿ ಚೇತರಿಸಿಕೊಳುತ್ತಿದ್ದೇನೆ. ಕನಿಷ್ಠ 3 ರಿಂದ 6 ತಿಂಗಳ ಅವಶ್ಯಕತೆ ಇದೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ನಿಖಿಲ್ ಕಾಮತ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. 42 ವರ್ಷದ ಯುವ ಉದ್ಯಮಿ ತಮ್ಮ ಆರೋಗ್ಯ ಕುರಿತ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
Photo Credit : News Kannada

ಬೆಂಗಳೂರು: ಭಾರತದ ಯುವ ಉದ್ಯಮಿ, ವಿಶ್ವ ಮಟ್ಟದಲ್ಲಿ ಭಾರಿ ಪ್ರಖ್ಯಾತಿ ಪಡೆದಿರುವ ಕರ್ನಾಟಕದ ನಿಖಿಲ್ ಕಾಮತ್ ಸ್ಟ್ರೋಕ್‌ನಿಂದ ಆಸ್ಪತ್ರೆ ದಾಖಲಾಗಿರುವ ಮಾಹಿತಿ ಬಹಿರಂಗವಾಗಿದೆ. 6 ವಾರಗಳ ಹಿಂದೆ ಸ್ಟ್ರೋಕ್‌ಗೆ ತುತ್ತಾಗಿ ಆಸ್ಪತ್ರೆ ದಾಖಲಾಗಿದ್ದೆ, ಇದೀಗ ನಿಧಾನವಾಗಿ ಚೇತರಿಸಿಕೊಳುತ್ತಿದ್ದೇನೆ. ಕನಿಷ್ಠ 3 ರಿಂದ 6 ತಿಂಗಳ ಅವಶ್ಯಕತೆ ಇದೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ನಿಖಿಲ್ ಕಾಮತ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. 42 ವರ್ಷದ ಯುವ ಉದ್ಯಮಿ ತಮ್ಮ ಆರೋಗ್ಯ ಕುರಿತ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ತಮ್ಮ ಆರೋಗ್ಯದ ಕುರಿತು ನಿಖಿಲ್ ಕಾಮತ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. 6 ವಾರಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿದ್ದೆ. ತಂದೆಯ ನಿಧನ, ಕಡಿಮೆ ನಿದ್ರೆ, ನಿಶ್ಯಕ್ತಿ, ನಿರ್ಜಲೀಕರಣ, ಅತಿಯಾದ ಕೆಲಸ, ಒತ್ತಡಗಳಲ್ಲಿ ನನ್ನಗೆ ಭಾದಿಸಿದ ಮೈಲ್ಡ್ ಸ್ಟ್ರೋಕ್‌ಗೆ ಕಾರಣವಾಗಿರಬದು. ಇದರಿಂದ ನಾನು ಸೊರಗಿ ಹೋದೆ. ಓದಲು-ಬರೆಯಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದ್ದೇನೆ. ನಿಧಾನವಾಗಿ ಓದಲು ಬರೆಯಲು ಪ್ರಯತ್ನಿಸುತ್ತಿದ್ದೇನೆ. ಆ್ಯಬ್ಸೆಂಟ್ ಮೈಂಡ್‌ನಿಂದ ಪ್ರೆಸೆಂಟ್ ಮೈಂಡ್‌ಗೆ ಬರುತ್ತಿದ್ದೇನೆ. ಚೇತರಿಕೆಗೆ ಕನಿಷ್ಠ 3 ರಿಂದ 6 ತಿಂಗಳ ಅವಶ್ಯಕತೆ ಇದೆ. ಫಿಟ್ ಆಗಿರುವ ವ್ಯಕ್ತಿಗೆ ಈ ರೀತಿ ಆಗಿದೆ ಅನ್ನೋದು ನನ್ನನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿದೆ. ಒಂದೇ ವೇಗ, ವೇಗ ಹೆಚ್ಚಿಸುತ್ತಾ ಓಡುತ್ತಿರುವಾಗ ಗೇರ್ ಬದಲಿಸುವುದು ತಿಳಿದೊಳ್ಳಬೇಕು. ಅವಶ್ಯಕತೆ ಬಿದ್ದಾಗ ನಿಧಾನವಾಗಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಸ್ವಲ್ಪ ಮುರಿದಿದೆ, ಆದರೆ ಟ್ರೆಡ್ ಮಿಲ್ ಕೌಂಟ್ ಆರಂಭಿಸುತ್ತಿದ್ದೇನೆ ಎಂದು ನಿಖಿಲ್ ಕಾಮತ್ ಸುದೀರ್ಘ ಪೋಸ್ಟ್ ಮಾಡಿದ್ದಾರೆ.

ಇನ್ನು ಮೈಲ್ಡ್ ಸ್ಟ್ರೋಕ್‌ನಿಂದ ಚೇತರಿಸಿಕೊಳ್ಳುತ್ತಿರುವ ನಿಖಿಲ್ ಕಾಮತ್ ಇದೀಗ ವೈದ್ಯರು ಸೂಚನೆಯಂತೆ ನಿಧಾನವಾಗಿ ವ್ಯಾಯಾಮ ಆರಂಭಿಸಿದ್ದಾರೆ. ಶೀಘ್ರದಲ್ಲೇ ಚೇತರಿಸುವ ಭರವಸೆಯನ್ನು ಹೊಂದಿದ್ದಾರೆ. ತಮ್ಮ ಟ್ವೀಟ್ ಮೂಲಕ ಮಹತ್ವದ ಸಂದೇಶವನ್ನು ನೀಡಿದ್ದಾರೆ. ಒತ್ತಡದಲ್ಲಿ ಕೆಲಸ, ಅತೀಯಾದ ಕೆಲಸದಿಂದ ಕಡಿಮೆ ನಿದ್ದೆ, ಆರೋಗ್ಯದ ಕಾಳಜಿ ವಹಿಸದೇ ಇರುವುದು ಅತೀ ದೊಡ್ಡ ಹಿನ್ನಡೆ ಕಾರಣವಾಗಲಿದೆ ಎಂದಿದ್ದಾರೆ. ಇಷ್ಟೇ ಅಲ್ಲ ನೀವು ಜಿಮ್ ಅಭ್ಯಾಸ ಮಾಡಿ ಅದೆಷ್ಟೇ ಫಿಟ್ ಆಗಿದ್ದರೂ ದೇಹಕ್ಕೆ ನಿಯಮಿತವಾದ ನಿದ್ದೆ, ಆಹಾರ, ನೀರು, ಒತ್ತಡವಿಲ್ಲದ ಬದುಕು ಅತೀ ಅಗತ್ಯ ಅನ್ನೋದನ್ನು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು