ದೊಡ್ಡಬಳ್ಳಾಪುರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವೈದ್ಯಕೀಯ ಸಲಹೆಗಾರರಾಗಿ ಡಾ.ಬಿ.ಸಿ.ನರಸಿಂಹಜ್ಞಾನಿ ಅವರನ್ನು ನೇಮಕ ಮಾಡಿದೆ.
ಎಂಬಿಬಿಎಸ್, ಎಂ.ಡಿ, ಎಫ್ಐಸಿಎಂ, ಐಡಿಸಿಸಿಎಂ ವಿದ್ಯಾರ್ಹತೆ ಹೊಂದಿರುವ ಡಾ.ನರಸಿಂಹಜ್ಞಾನಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಉಪಮುಖ್ಯಮಂತ್ರಿ ವೈದ್ಯಕೀಯ ಸಲಹೆಗಾರರಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ವೈದ್ಯ ಡಾ.ನರಸಿಂಹಜ್ಞಾನಿ ಸಾಸಲಿ ಹೋಬಳಿ ಬಂಡಯ್ಯನಪಾಳ್ಯದವರು. ಇಲ್ಲಿನ ಜವಹಾರ್ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಪ್ರಸ್ತುತ ಬೆಂಗಳೂರಿನ ನಾಗರಬಾವಿ ಟ್ರೂಲೈಫ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.