ಬೆಂಗಳೂರು: ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಗೆ ಆಗಮಿಸಿದ್ದ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಉಮೇಶ್ ಜಾಧವ್ ಅವರು ಅರ್ಧ ಗಂಟೆಗಳ ಲಿಫ್ಟ್ ನಲ್ಲಿ ಸಿಲುಕಿಕೊಂಡಿದ್ದ ಘಟನೆ ನಡೆದಿದೆ.
ಇಂದು ಬೆಂಗಳೂರಿನ ಬಿಜೆಪಿ ಕಚೇರಿಗೆ ಆಗಮಿಸಿದ್ದ ಸಂಸದ ಉಮೇಶ್ ಜಾಧವ್ ಹಾಗೂ ಇತರ ಮೂವರು ಲಿಫ್ಟ್ ನಲ್ಲಿ ಹೋಗುತ್ತಿದ್ದ ವೇಳೆ ಕರೆಂಟ್ ಹೋಗಿದ್ದು ಲಿಫ್ಟ್ ನಿಂತು ಹೋಗಿತ್ತು.
ಕರೆಂಟ್ ಬಂದ ಮೇಲೂ ಲಿಫ್ಟ್ ವರ್ಕ್ ಆಗಿಲ್ಲ. ಕೊನೆಗೆ ಅರ್ಧ ಗಂಟೆಯ ಬಳಿಕ ಕಚೇರಿಯ ನೆಲಮಹಡಿಯಲ್ಲಿ ಲಿಫ್ಟ್ ಅರ್ಧದಲ್ಲಿ ತೆರೆದುಕೊಂಡಿದ್ದು, ಬಳಿಕ ಲಿಫ್ಟ್ನಿಂದ ಜಾದವ್ ಹೊರ ಬಂದಿದ್ದಾರೆ.
ಸದ್ಯ ಲಿಫ್ಟ್ ಟೆಕ್ನಿಷಿಯನ್ ಕರೆಸಿ ಕೆಟ್ಟು ನಿಂತ ಲಿಫ್ಟ್ ಸರಿಪಡಿಸಲಾಗುತ್ತಿದೆ.