ಬೆಂಗಳೂರು: ವಿಧಾನಸಭೆಯಲ್ಲಿ ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಅಳಲು ತೋಡಿಕೊಂಡ ಘಟನೆ ನಡೆಯಿತು. ದೇವದುರ್ಗದಲ್ಲಿ ಅಕ್ರಮ ಮರಳು ದಂಧೆ ಮಿತಿ ಮೀರಿದೆ. ಅದನ್ನು ಬಂದ್ ಮಾಡಿಸುವ ಪ್ರಯತ್ನ ಮಾಡಿದೆ. ಕೆಲವರು ನನ್ನ ಮೇಲೆ ಲಾರಿ ಹತ್ತಿಸ್ತೀನಿ ಅಂತ ಮಾತಾಡ್ತಾರೆ ಅಂತಾ ವಿಚಾರವನ್ನು ಮುಂದಿಟ್ಟರು.
ಮಾಜಿ ಶಾಸಕರ ಬೆಂಬಲಿಗರು ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ. ಅಧಿಕಾರಿಗಳು ನಾನೊಬ್ಬ ಶಾಸಕಿ ಅನ್ನೋದನ್ನೇ ಪರಿಗಣಿಸದೇ ಪ್ರತಿಷ್ಠೆ ತೋರಿಸುತ್ತಿದ್ದಾರೆ. ಮಟ್ಕಾ ದಂಧೆ ಬಂದ್ ಮಾಡಿಸಿದರೂ ಪೊಲೀಸರು ಸಹಕಾರ ನೀಡುತ್ತಿಲ್ಲ. ಶಿಷ್ಟಾಚಾರಕ್ಕೂ ಪೊಲೀಸರು ಶಾಸಕಿ ಅಂತ ನನಗೆ ಗೌರವ ನೀಡ್ತಿಲ್ಲನೀಡುತ್ತಿಲ್ಲ. ಶಿಷ್ಟಾಚಾರವನ್ನೂ ಪೊಲೀಸರು ಪಾಲಿಸುತ್ತಿಲ್ಲ. ಮಾಜಿ ಶಾಸಕರು ಪೊಲೀಸರಿಗೆ ಹೆದರಿಸ್ತಿದ್ದಾರೆ. ನನ್ನ ಸಹೋದರನ ತಮ್ಮನ ಮೇಲೆ ಮರಳು ದಂಧೆಯವರು ಹಲ್ಲೆ ಮಾಡಿದ್ದಾರೆ. ನನಗೆ ಸೂಕ್ತ ಭದ್ರತೆ ಸರ್ಕಾರ ಒದಗಿಸಬೇಕು ಅಂತಾ ಮನವಿ ಮಾಡಿದ್ದಾರೆ.