ಬೆಂಗಳೂರು: ರಾಜ್ಯದಲ್ಲಿ ಬಸಿಲಿನ ಧಗೆಗೆ ಭೂ ತಾಯಿ ಬರಡಾಗಿದ್ದಾಳೆ. ಈಗಾಗಲೇ ಹವಮಾನ ಇಲಾಖೆ ಹಲವು ಬಾರಿ ಎಚ್ಚರಿಕೆ ನೀಡಿತ್ತು. ಆದರೆ ಈ ಬಾರಿ ನಾಡಿನ ಜನತೆಗೆ ಖಡಕ್ ಎಚ್ಚರಿಕೆ ನೀಡಿದೆ. ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಮುನ್ಸೂಚನೆ ನೀಡಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 2 ರಿಂದ 16ರವರೆಗೆ ಬಿಸಿಗಾಳಿ ಬೀಸುವ ಸಾಧ್ಯತೆಗಳಿದ್ದು, ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹೆಚ್ಚಾಗಿ ಇರಲಿದೆ. ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಸುಡು ಬಿಸಿಲಿನಲ್ಲಿ ಹಾಗೆ ಓಡಾಡುವುದು ಆರೋಗ್ಯಕ್ಕೆ ಕುತ್ತು ತರಬಹುದು ಹೀಗಾಗಿ ಕೊಡೆ ಬಳಕೆ ಮಾಡಿದರೆ ಉತ್ತಮ. ನೀರಿನಂಶ ಇರುವ ಪದಾರ್ಥಗಳನ್ನ ಹಾಗಾಗ ಸೇವೆನೆ ಮಾಡಿದರೆ ಬಿಸಿಲಿನ ಜಳಕ್ಕೆ ಒಳ್ಳೆಯದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
1/2 #heatwave days #forecast outlook for #April -2024: ABOVE NORMAL heatwave days of positive anomalies varying from 2 to 5 days duration is likely to occur over most parts of North Interior Karnataka (NIK) districts and few districts, such as Chitradurga, Davanagere, Tumakuru, pic.twitter.com/tEByHJ0XHH
— Karnataka State Natural Disaster Monitoring Centre (@KarnatakaSNDMC) April 2, 2024