News Karnataka Kannada
Monday, April 29 2024
ಬೆಂಗಳೂರು

ಇಂಗ್ಲಿಷ್ ಸರಿಯಾಗಿ ಅರ್ಥವಾಗದಿರುವುದು ಆರ್​ಸಿಬಿ ತಂಡದ ಸೋಲಿಗೆ ಕಾರಣ : ಸೆಹ್ವಾಗ್

ಆರ್​ಸಿಬಿಯಲ್ಲಿ  ಕೆಲವರು ಮಾತ್ರ ಅಂತರರಾಷ್ಟ್ರೀಯ ಆಟಗಾರರು. ಉಳಿದವರೆಲ್ಲರೂ ಭಾರತೀಯರು ಮತ್ತು ಅವರಲ್ಲಿ ಅರ್ಧದಷ್ಟು ಜನರಿಗೆ ಇಂಗ್ಲಿಷ್ ಸರಿಯಾಗಿ ಅರ್ಥವಾಗುವುದಿಲ್ಲ. ಆ ತಂಡದಲ್ಲಿ ಒಬ್ಬನೇ ಒಬ್ಬ ಭಾರತೀಯ ಸಿಬ್ಬಂದಿ ಇಲ್ಲ. ಕನಿಷ್ಠ ಆಟಗಾರರು ನಂಬಬಹುದಾದ ಯಾರಾದರೂ ಇರಬೇಕು ಎಂದು ಸೆಹ್ವಾಗ್ ಆರ್​ಸಿಬಿ ಮ್ಯಾನೇಜ್ಮೆಂಟ್ ಅನ್ನು ಪ್ರಶ್ನಿಸಿದ್ದಾರೆ.
Photo Credit : NewsKarnataka

ಬೆಂಗಳೂರು: ಆರ್​ಸಿಬಿಯಲ್ಲಿ  ಕೆಲವರು ಮಾತ್ರ ಅಂತರರಾಷ್ಟ್ರೀಯ ಆಟಗಾರರು. ಉಳಿದವರೆಲ್ಲರೂ ಭಾರತೀಯರು ಮತ್ತು ಅವರಲ್ಲಿ ಅರ್ಧದಷ್ಟು ಜನರಿಗೆ ಇಂಗ್ಲಿಷ್ ಸರಿಯಾಗಿ ಅರ್ಥವಾಗುವುದಿಲ್ಲ. ಆ ತಂಡದಲ್ಲಿ ಒಬ್ಬನೇ ಒಬ್ಬ ಭಾರತೀಯ ಸಿಬ್ಬಂದಿ ಇಲ್ಲ. ಕನಿಷ್ಠ ಆಟಗಾರರು ನಂಬಬಹುದಾದ ಯಾರಾದರೂ ಇರಬೇಕು ಎಂದು ಸೆಹ್ವಾಗ್ ಆರ್​ಸಿಬಿ ಮ್ಯಾನೇಜ್ಮೆಂಟ್ ಅನ್ನು ಪ್ರಶ್ನಿಸಿದ್ದಾರೆ.

ದೊಡ್ಡ ಸಮಸ್ಯೆಯೆಂದರೆ ಭಾರತೀಯ ಸಹಾಯಕ ಸಿಬ್ಬಂದಿಯ ಕೊರತೆ. ನಿಮ್ಮ ಬಳಿ 12ರಿಂದ 15 ಭಾರತೀಯ ಆಟಗಾರರು ಇದ್ದಾರೆ. ಕೇವಲ 10 ವಿದೇಶಿ ಆಟಗಾರರನ್ನು ಹೊಂದಿದ್ದೀರಿ. ನಿಮ್ಮ ಇಡೀ ಸಹಾಯಕ ಸಿಬ್ಬಂದಿ ವರ್ಗ ವಿದೇಶಿಯರಾಗಿದ್ದಾರೆ ಅದುವೇ ಸಮಸ್ಯೆಯಾಗಿದೆ.

ಆಟಗಾರರಿಗೆ ಆರಾಮದಾಯಕ ಪರಿಸ್ಥಿತಿ ಸಿಗಬೇಕು. ನಾಯಕ ಫಾಫ್ ಡು ಪ್ಲೆಸಿಸ್ ಅವರ ಮುಂದೆ ನಿಲ್ಲುವುದೇ ಇಲ್ಲ. ಯಾಕೆಂದರೆ ಅವರಿಗೆ ಭಾಷೆ ಬರುವುದಿಲ್ಲ. ಅವರು ಏನನ್ನಾದರೂ ಕೇಳಿದರೆ, ಅವರು ಉತ್ತರಿಸಬೇಕಾಗುತ್ತದೆ.

ನಾಯಕ ಭಾರತೀಯನಾಗಿದ್ದರೆ, ಆಟಗಾರನ ಮನಸ್ಸಿನಲ್ಲಿ ಏನಾಗುತ್ತಿದೆ ಹಂಚಿಕೊಳ್ಳಬಹುದು. ವಿದೇಶಿ ಆಟಗಾರರಿಗೆ ಇದೇ ಪರಿಸ್ಥಿತಿ ಎದುರಾಗಿದ್ದರೆ ಏನು ಮಾಡಬೇಕಾಗಿತ್ತು. ಹೀಗಾಗಿ ಆರ್​ಸಿಬಿಗೆ ಕನಿಷ್ಠ 2-3 ಭಾರತೀಯ ಸಹಾಯಕ ಸಿಬ್ಬಂದಿಯ ಅಗತ್ಯವಿದೆ ಎಂದು ಸೆಹ್ವಾಗ್ ಹೇಳಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದು ನಿರಾಶಾದಾಯಕ ಸೋಲಿಗೆ ಒಳಗಾಗಿದೆ. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿಯಲ್ಲಿ ಆಘಾತಕಾರಿ ಫಲಿತಾಂಶ ಎದುರಿಸಿದೆ.

ಪ್ರತಿ ಋತುವಿನಲ್ಲಿ, ಫ್ರಾಂಚೈಸಿ ತಮ್ಮ ಅಭಿಮಾನಿಗಳಿಗೆ ಕಳಪೆ ಪ್ರದರ್ಶನದಿಂದ ಅವರಿಗೆ ಬೇಸರ ಮೂಡಿಸುತ್ತದೆ. 2024 ರ ಅಭಿಯಾನವು ಅದಕ್ಕಿಂತ ಭಿನ್ನವಾಗಿಲ್ಲ. ಆರ್​ಸಿಬಿ 7 ಪಂದ್ಯಗಳಲ್ಲಿ 6 ಸೋಲುಗಳನ್ನು ಅನುಭವಿಸಿ 10 ತಂಡಗಳ ಪಾಯಿಂಟ್ಸ್​​ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು