ಬೆಂಗಳೂರು: ಕೋಲಾರ ನಗರದಲ್ಲಿ ಇಬ್ಬರು ಯುವಕರು ಆರ್ಎಸ್ಎಸ್ ಮುಖಂಡರೊಬ್ಬರಿಗೆ ಚಾಕುವಿನಿಂದ ಇರಿದ ಘಟನೆ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಉದ್ವಿಗ್ನಗೊಂಡಿದೆ. ಪಾರ್ಕಿಂಗ್ ವಿಚಾರವಾಗಿ ಜಗಳ ನಡೆದಿದೆ.
ಜಿಲ್ಲಾ ಸಹ ಶಾರೀರಕ ಪ್ರಮುಖರಾದ ರವಿಕುಮಾರ್ ಗಾಯಗೊಂಡ ಮುಖಂಡ. ಅವರ ಅಂಗಡಿ ಮುಂದೆಯೇ ಈ ಘಟನೆ ನಡೆದಿದೆ.
ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ.
ಪೊಲೀಸರ ಪ್ರಕಾರ, ಬೈಕ್ ಪಾರ್ಕಿಂಗ್ ವಿಚಾರವಾಗಿ ಜಗಳ ಶುರುವಾಗಿದ್ದು, ರವಿಕುಮಾರ್ ಜಗಳ ಬಿಡಿಸಲು ಹೋದಾಗ ಚಿಕ್ಕ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.